ಇವರುಗಳ ದೇಹದ ಕಟ್ಟ ಕಡೆಯ ಹನಿಯ ರಕ್ತವೂ ಪರಮಪಾಪವನ್ನೇ ಬಯಸುತ್ತಾ. ದೇವರಾಣೆ…ಇವರೆಲ್ಲಾ ಮನುಷ್ಯ ರೂಪದಲ್ಲಿರುವ ನರರಾಕ್ಷಸರಾ? ಆತ್ಮಸಾಕ್ಷಿ, ಪಾಪಪ್ರಜ್ಞೆ ಅನ್ನೋದು ಇವರುಗಳ ಡಿಎನ್ ಎ ನಲ್ಲೇ ಇಲ್ವಾ? ಅದಿನ್ನೆಷ್ಟು ಭಂಡತನವಿರಬಹುದು, ನಾಚಿಕೆ ಅನ್ನೋದನ್ನ ಅದ್ಯಾವ ಊರಿನಾಚೆಗೆ ಕಟ್ಟಿಟ್ಟು ಬಂದಿದ್ದಾರೋ ಗೊತ್ತಿಲ್ಲ? ಮಾನ-ಮರ್ಯಾದೆ ಎನ್ನುವುದು ಮೂರು ಕಾಸಿಗೆ ಹರಾಜಾಗಿದ್ದರೂ ನಾವು, ನಮ್ಮದು ಎನ್ನುವುದನ್ನು ಬಿಡುವ ಹಾಗೆ ಕಾಣುತ್ತಿಲ್ಲ ಪಾಪರ್ ಪಾಕಿಸ್ತಾನ.
ಭಾರತದ 80 ಯುದ್ಧ ವಿಮಾನಗಳಿಂದ ದಾಳಿಯ ಪ್ಲ್ಯಾನ್
ಸುಳ್ಳು ಹೇಳಿದರೂ ಪರವಾಗಿಲ್ಲ. ಆದರೆ, ಅದು ಸ್ವಲ್ಪವಾದರೂ ಸತ್ಯಕ್ಕೆ ಹತ್ತಿರದಲ್ಲಿದ್ದರೆ ಚೆಂದ. ಆದರೆ, ಇವತ್ತು ಪಾಕ್ ಕಟ್ಟುತ್ತಿರುವ ಕತೆಯನ್ನು ಬಹುಶ: ಆ ದೇಶದ ತಿಳುವಳಿಕೆ ಇರುವ ಯಾರೋಬ್ಬರೂ ನಂಬಲಿಕ್ಕಿಲ್ಲ ಅನ್ನಿಸುತ್ತೆ. ಹೌದು, ಆಪರೇಷನ್ ಸಿಂಧೂರ್ ಹೆಸರಲ್ಲಿ ಭಾರತದ 80 ಯುದ್ಧ ವಿಮಾನಗಳು ನಮ್ಮ ಮೇಲೆ ದಾಳಿಗೆ ಬಂದಿದ್ದವು. ಆದರೆ, ಈ ಬಗ್ಗೆ ನಮಗೆ ಮೊದಲೇ ಗುಪ್ತಚರ ಮಾಹಿತಿ ಇತ್ತು. ಹೀಗಾಗಿ ಪಾಕ್ ಪ್ರವೇಶಕ್ಕೆ ಯತ್ನಿಸಿದ್ದ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದೇವೆ. ಅಷ್ಟೇ ಅಲ್ಲಾ ಭಾರತದ ರಫೇಲ್ ವಾರ್ ಫ್ಲೈಟನ್ನೇ ಉಡಾಯಿಸಿದ್ದೇವೆ ಅಂತಾ ಪಾಪರ್ ದೇಶದ ಪ್ರಧಾನಿ ಶೆಬಬಾಜ್ ಶರೀಫ್ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ.
ಗಾಳಿಯಲ್ಲಿ ಗುಂಡು ಹೊಡೆದು ತೆಪ್ಪಗಾದ ಪಾಕ್ ಪ್ರಧಾನಿ
ಅದಿನ್ನೆಷ್ಟು ಬರೆಗೆಟ್ಟಿರಬೇಕು ಈ ಪಾಕಿಗಳು. ಉಗ್ರರೊಟ್ಟಿಗೆ ಕೂತು ಭರ್ಜರಿ ಬಿರಿಯಾನಿ ತಿಂದು ಗಡದ್ ನಿದ್ರೆಗೆ ಜಾರಿದ್ದವರ ಮೇಲೆ ಹ್ಯಾಮರ್ ಕ್ಷಿಪಣಿ ಬಿದ್ದಾಗಲೇ ಇವರುಗಳು ಕಣ್ಣು ತೆರೆದಿದ್ದು. ಅಷ್ಟೊತ್ತಿಗಾಗಲೇ ಜೈಶ್ ನ ಮಸೂದ್ ಅಜರ್ ನ ಕುಟುಂಬವೇ ಸರ್ವನಾಶವಾಗಿ ಹೋಗಿತ್ತು. ಅಯ್ಯೋ ನಾನು ನನ್ನ ಕುಟುಂಬದೊಟ್ಟಿಗೆ ಸತ್ತು ಬಿಟ್ಟಿದ್ರೆ ಚೆನ್ನಾಗಿರುತ್ತಿರಲಿಲ್ಲ ಅಂತಾ ರಕ್ತಪೀಪಾಸು ಕಣ್ಣೀರಿಟ್ಟಿದ್ದ. ಆದರೆ ಇದ್ಯಾವುದು ನನಗೆ ಗೊತಿಲ್ಲ ಎನ್ನುವಂತೆ ಪಾಕ್ ಪ್ರಧಾನಿ ಮಾತ್ರ, ಭಾರತದ ರಫೇಲ್ ಉಡಾಯಿಸಿದ್ದೀವಿ ಅಂತಾ ಚೀರಿಕೊಳ್ಳುತ್ತಿದ್ದಾರೆ. ಹಾಗಂತಾ ಒಂದೇ ಒಂದು ಸಾಕ್ಷ್ಯ ನೀಡದೆ ಕೇವಲ ಗಾಳಿಯಲ್ಲಿ ಗುಂಡು ಹಾರಿಸಿ ಕೈತೊಳೆದುಕೊಂಡಿದ್ದಾರೆ. ಅಷ್ಟೇ ಅಲ್ಲಾ ಒಂದು ಬೇಜಾವಾಬ್ದಾರಿ ದೇಶ ಪಾಕ್ ಅನ್ನೋದಕ್ಕೆ ಇದಕ್ಕಿಂತಾ ದೊಡ್ಡ ಪುರಾವೆ ಬೇಕಾ?
ಹೌದು, ಭಾರತದ ಫೈಟರ್ ಜೆಟ್ ನ್ನ ಪಾಕ್ ಹೊಡೆದುರುಳಿಸಿದೆಯಂತೆ ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳೇ ಸಾಕ್ಷಿಗಳಂತೆ..ಅಬ್ಬಬ್ಬಾ, ಮೆಚ್ಚಿದೆವಪ್ಪಾ ನಿಮ್ಮ ಉತ್ತರ ಕುಮಾರನ ಪೌರುಷವನ್ನು, ಓತೀಕ್ಯಾತಕ್ಕೆ ಬೇಲಿ ಸಾಕ್ಷಿ ಅಂದ್ರಂತೆ ಅದು ಬಹುಷಹ ನಿಮ್ಮನ್ನ ನೋಡಿಯೇ ಇರಬೇಕೇನೋ? ಅದಿರಲಿ ಅದೇನೋ, ನಾವು ಸುಮ್ಮಿನಿರೋದಿಲ್ಲ, ನಮ್ಮ ಸಂಯಮ ಕೆಣಕಿದ್ದೀರಿ ಅಂತೆಲ್ಲಾ ಶರೀಫ್ ಬಿರಿಯಾನಿ ಗುಂಗಲ್ಲಿ ಮಾತನಾಡಿದ್ದಾರೆ. ಬಟ್ ಈ ಮಾತನ್ನ ಆ ದೇಶದವರೇ ಸೀರಿಯಸ್ಸಾಗಿ ತೆಗದುಕೊಳ್ಳುತ್ತಿಲ್ಲ. ಭಾರತದ ತಂಟೆಗೆ ಬಂದ್ರೆ ಬಾಲ ಕತ್ತರಿಸಲು ಅಂತಾ ಆಪರೇಷನ್ ಸಿಂಧೂರ್ ಪಾರ್ಟ್ 2 ರೆಡಿ ಇದೆ. ಅದೇನೇ ಇರಲಿ, ಪಾಕಿಗಳು ಮಾತ್ರ ಕಂಪ್ಲೀಟ್ ಡರ್ ಆಗಿರುವುದಂತೂ ಅವರ ಮಾತುಗಳಲ್ಲೇ ಸಾಬೀತಾಗುತ್ತಿದೆ.



















