ಕಲಬುರಗಿ: ಕಾಶಿ ಕಾರಿಡಾರ್ ಮಾದರಿಯಲ್ಲಿ ಗುರುದತ್ತನ ಕ್ಷೇತ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಜೆಡಿಎಸ್ ಮುಖಂಡ ಶಿವು ನಾಟೀಕರ್ ನೇತೃತ್ವದಲ್ಲಿ ಗಾಣಗಾಪುರ ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ಭಕ್ತರು ಪರದಾಡುವಂತೆ ಆಗಿದೆ.
ಕಳೆದ 15 ದಿನಗಳಿಂದ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಕೂಡ ಧರಣಿ ನಡೆಸಿದ್ದರು. ಆದರೆ, ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಜಿಲ್ಲೆಯ ಅಫಜಲಪುರ ತಾಲೂಕಿನ ಪುಣ್ಯಕ್ಷೇತ್ರ ಗಾಣಗಾಪುರಕ್ಕೆ ಬರುವ ಭಕ್ತರು ಕಷ್ಟ ಪಡುವಂತಾಗುತ್ತಿದೆ. ಹೀಗಾಗಿ ಗಾಣಗಾಪುರ ಮತ್ತು ದತ್ತನ ದರ್ಶನ್ ಬಂದ್ ಆಗಿದ್ದರಿಂದಾಗಿ ಭಕ್ತರು ಮರಳಿ ಹೋಗುತ್ತಿದ್ದಾರೆ.