farm
ಚಿಕ್ಕಮಗಳೂರು: ಕಾಫಿನಾಡಿನಲ್ಲಿ 42 ಕಾಡಾನೆಗಳ ಹಿಂಡು ದಾಂಧಲೆ ನಡೆಸಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. ಆನೆಗಳ ದಾಳಿಯಿಂದಾಗಿ ಎರಡು ಎಕರೆ ಕಾಫಿತೋಟ ಸಂಪೂರ್ಣವಾಗಿ ನಾಶವಾಗಿದೆ. ಮಾಕೋನಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರ ತೋಟದಲ್ಲಿ ದಾಂಧಲೆ ಮಾಡಿರುವ ಆನೆಗಳ ಹಿಂಡು ಎರಡು ಎಕರೆಯಲ್ಲಿ ಬೆಳೆದಿದ್ದ ಕಾಫಿ, ಬಾಳೆ, ಅಡಿಕೆ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ.
ಗೋಣಿಬೀಡು ಹೋಬಳಿಯ ನಾಲ್ಕು ಗ್ರಾಮದಲ್ಲಿ ಕಾಡಾನೆಗಳು ಸಂಚಾರ ನಡೆಸಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಓಲ್ಡ್ ಬೆಲ್ಟ್, ಭುವನೇಶ್ವರಿ ಕಾಡಾನೆಗಳ ಟೀಮ್ ಜನರಿಗೆ ಉಪಟಳ ನೀಡುತ್ತಿವೆ. ಹಾಸನದಿಂದ ಗೋಣಿಬೀಡು ಹೋಬಳಿಯ ಗ್ರಾಮಕ್ಕೆ 42 ಕಾಡಾನೆಗಳ ಹಿಂಡು ಬಂದಿದೆ. ಈ ಆನೆಗಳು ರಸ್ತೆಯುದ್ದಕ್ಕೂ ಸಿಕ್ಕ ಗ್ರಾಮ, ಕಾಫಿ ತೋಟದಲ್ಲಿ ಸಂಚಾರ ಮಾಡಿ ಆತಂಕ ಸೃಷ್ಟಿವೆ.
ಗೋಣಿಬೀಡು ಹೋಬಳಿಯ ಮಾಕೋನಹಳ್ಳಿ, ಕಾರ್ ಬೈಲು, ನಂದಿಪುರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಸಂಚಾರ ಮಾಡುತ್ತಿವೆ. ಹೀಗಾಗಿ ಗೋಣಿಬೀಡು ಹೋಬಳಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ.