ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ತಾಲ್ಲೂಕಿನ ಕೆರೆಗಳಲ್ಲಿ ಭಾರೀ ಮಣ್ಣು ದಂಧೆ ನಡೆಯುತ್ತಿದೆ. ಆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯ ಚೇಳೂರು ತಾಲ್ಲೂಕಿನ ಕೆರೆಗಳಲ್ಲಿ ಭಾರಿ ಮಣ್ಣು ದಂಧೆ ನಡೆಯುತ್ತಿದೆ. ನೀರಿಲ್ಲದೆ ಈಗಾಗಲೇ ಕೆರೆಗಳು ಬರಿದಾಗುತ್ತಿವೆ. ಈ ಮಧ್ಯೆ ಅಕ್ರಮವಾಗಿ ಕೆರೆಯ ಮಣ್ಣು ಮಾರಾಟ ಮಾಡಲಾಗುತ್ತಿದೆ. ಅವೈಜ್ಞಾನಿಕವಾಗಿ ಕೆರೆಗಳಲ್ಲಿನ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಆದರೂ ನಲ್ಲುಗುಟ್ಲಹಳ್ಳಿ ಗ್ರಾಪಂ ಅಧಿಕಾರಿಗಳು ಕಂಡು ಕಾಣದಂತೆ ಮೌನ ವಹಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಲ್ಲಗುಟ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ವೆಂಕಟಾಪುರ ಗ್ರಾಮದ ಕೆರೆಯಲ್ಲಿ ಬಾರಿ ಅಕ್ರಮ ಮಣ್ಣು ದಂಧೆ ನಡೆಯುತ್ತಿದೆ. ಇಟ್ಟಿಗೆ ಫ್ಯಾಕ್ಟರಿ, ಲೇಔಟ್ ನಿರ್ಮಾಣಕ್ಕೆ ಕೆರೆಗಳ ಮಣ್ಣು ಮಾರಾಟ ಮಾಡಲಾಗುತ್ತಿದೆ. 5 ರಿಂದ 10 ಅಡಿಗಳಷ್ಟು ಮಣ್ಣನ್ನು ಈಗಾಗಲೇ ಮಣ್ಣುಬಾಕರು ಖಾಲಿ ಮಾಡಿದ್ದಾರೆ. ಇದನ್ನು ಗಮನಿಸಿದರೆ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಿದ್ದಾರೆ ಎಂಬ ಸಂಶಯ ಬರುತ್ತಿದೆ. ಹೀಗಾಗಿ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.