ಬೀದರ್: ಖದೀಮರು ಒಂದೇ ಒಂದು ರಾತ್ರಿ ಗ್ರಾಮನ್ನೇ ಗುಡಿಸಿ ಗುಂಡಾಂತರ ಮಾಡಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಮಾಪುರದಲ್ಲಿ (Umapura) ನಡೆದಿದೆ .ಒಂದೇ ರಾತ್ರಿಯಲ್ಲಿ 8ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ಖದೀಮರು ಬರೋಬ್ಬರಿ 3.87 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಖತರ್ನಾಕ್ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಉಮಾಪುರ ಗ್ರಾಮದಲ್ಲಿ 2.77 ಲಕ್ಷ ರೂ. ಹಾಗೂ ಕೊಂಗೇವಾಡಿ ತಾಂಡದಲ್ಲಿ 1.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿಎರಡು ಬೈಕ್ ಮೇಲೆ ಬಂದಿದ್ದ 6 ಜನ ಖದೀಮರು, ರಾತ್ರಿ ಜನರು ಮಲಗಿದ ಮೇಲೆ ಕೆಲವು ಮನೆಗಳಿಗೆ ನುಗ್ಗಿ ದೋಚಿದ್ದಾರೆ. 6 ಮನೆಗಳು ಸೇರಿದಂತೆ ಕೊಂಗೆವಾಡಿ ತಾಂಡ, ಚಂಡಕಾಪುರ ಗ್ರಾಮದಲ್ಲೂ ತಲಾ ಒಂದೊಂದು ಮನೆಯ ಬೀಗ ಮುರಿದು ದೋಚಿ ಪರಾರಿಯಾಗಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಬಸವಕಲ್ಯಾಣ (Basava Kalyana) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ