ಬೆಳಗಾವಿ : ಎಲ್ಲ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದೇನೆ. ಎಲ್ಲರ ಪರವಾಗಿ ಅವರ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವೆ. ನಮ್ಮ ಸರ್ಕಾರ ಇರುವುದೇ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಎಂದು ವಸತಿ ಹಾಗೂ ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸುವರ್ಣ ಗಾರ್ಡ್ನಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ನಮ್ಮ ಸರ್ಕಾರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ನಾನು ಅದನ್ನು ದೊಡ್ಡವರೊಂದಿಗೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಪಟ್ಟಕ್ಕೆ ಯತೀಂದ್ರ ಹೇಳಿಕೆ ವಿಚಾರ
ಪದೇ ಪದೇ ನಾನು ಹೇಳಿದ್ದೇನೆ. 2028ರವರೆಗೂ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರೆಂದು. ಯತೀಂದ್ರ, ಅವರ ಅಭಿಪ್ರಾಯ ಹೇಳಿದ್ದಾರೆ. ಚರ್ಚೆ ಸಿಎಂ ಕುರ್ಚಿಖಾಲಿ ಇದ್ದಾಗ ಬರುತ್ತದೆ. ಆದರೆ ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಹೈಕಮಾಂಡ್ ಹಾಕಿರೋ ಗೆರೆಯನ್ನು ಯಾರೂ ದಾಟಲ್ಲ. ನಮ್ಮದು ಹೈಕಮಾಂಡ್ ಪಕ್ಷ ಸಿಎಂ ಕುರ್ಚಿ ಖಾಲಿಯಿಲ್ಲ
ಸಿದ್ದರಾಮಯ್ಯ ಬದಲಾವಣೆ ಮಾಡೋಕೆ ಯಾರಿಗೆ ಗಟ್ಸ್ ಇದೆ. ಗಟ್ಸ್ ಇರೋದು ಹೈಕಮಾಂಡ್ ಗೆ ಮಾತ್ರ. ಸಿದ್ದರಾಮಯ್ಯ ಬದಲಾವಣೆ ಯಾರಿಂದೂ ಸಾಧ್ಯವಿಲ್ಲ, ಸಾಧ್ಯವಿರೋದು ಹೈಕಮಾಂಡ್ ಗೆ ಮಾತ್ರ ಈ ಮೂಲಕ ಡಿಕೆ ಶಿವಕುಮಾರಗೆ ಜಮೀರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಹಾಗೂ ಶಾಸಕರ ಡಿನ್ನರ್ ಮೀಟಿಂಗ್ ವಿಚಾರ
ಅಧಿವೇಶನ ನಡೆಯೋ ವೇಳೆ ಡಿನ್ನರ್ ಮೀಟಿಂಗ್ ಆಗುತ್ತವೆ. ನಿನ್ನೆ ಅಶೋಕ ಪಟ್ಟಣ ಲಕ್ಷ್ಕೀ ಹೆಬ್ಬಾಳಕರ ಊಟ ವ್ಯವಸ್ಥೆ ಮಾಡಿದ್ದರು. ಪ್ರತಿ ವರ್ಷದಂತೆ ಮಾಜಿ ಶಾಸಕ ಫಿರೋಜ್ ಶೇಠ್ ಡಿನ್ನರ್ ಏರ್ಪಡಿಸಿದ್ದರು. ಅವರು ಹಲವಾರು ಡಿಶ್ ಗಳನ್ನು ಮಾಡಿಸಿದ್ದರು. ಅದರಲ್ಲಿ ನನಗೆ ಕೈಮಾ ಪಾವ್ ಬಹಳ ಇಷ್ಟವಾಯಿತು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಭಾರತದ ಜಲಗಡಿ ಪ್ರವೇಶಿಸಿದ ಪಾಕ್ ಬೋಟ್ ವಶಕ್ಕೆ | 11 ಮಂದಿ ಬಂಧನ!



















