ಚಿಕ್ಕಮಗಳೂರು : ಹುಬ್ಬಳ್ಳಿಯಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಹೆಣ್ಣು ಮಗಳು ಯಾವ ಪಕ್ಷಕ್ಕಾದ್ರೂ ಸೇರಿರಲಿ ಹೆಣ್ಣು ಮಗಳನ್ನು ವಿವಸ್ತ್ರಗೊಳಿಸಬಾರದು ಎಂದು ಎಂಎಲ್ಸಿ ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿ.ಟಿ ರವಿ ವರದಿಗಾರರೊಂದಿಗೆ ಮಾತನಾಡುತ್ತಾ, 307 ಕೇಸ್ ಹಾಕಿದ್ದೇವೆ ಎಂದು ಕಮಿಷನರ್ ಹೇಳಿರುವುದು ಬಹಳ ಮಜಾ. ಯಾರನ್ನ ಮರ್ಡರ್ ಮಾಡುವುದಕ್ಕೆ ಪ್ರಯತ್ನಿಸಿದ್ರು, ನೀವು ನಿಮ್ಮ ದೌರ್ಜನ್ಯವನ್ನ ಸಂತ್ರಸ್ತೆಯ ತಲೆಗೆ ಕಟ್ಟಿ ಇಲಾಖೆ ಬಚಾವ್ ಆಗ್ಬೇಕು ಅಂತ ಬಯಸಿದ್ದೀರಿ. ಗೃಹ ಸಚಿವರೇ ನೀವು, ನಿಮ್ಮ ಸರ್ಕಾರ ಇದೆ ಅಂತಾ ತೋರಿಸೋದಕ್ಕಾದ್ರೂ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಆ ಹೆಣ್ಣುಮಗಳಿಗೆ ನ್ಯಾಯ ಕೊಡಿಸಿ, ಸಂತ್ರಸ್ತೆಯ ಮೇಲೆ ಹಾಕಿರುವ ಸುಳ್ಳು ಮೊಕ್ಕದಮೆ ವಾಪಸ್ ತೆಗೆದುಕೊಂಡು, ಸಮಗ್ರ ತನಿಖೆಯನ್ನ ಹಾಲಿ ಮಹಿಳಾ ನ್ಯಾಯಾಧೀರ ನೇತ್ರತ್ವದಲ್ಲಿ ನಡೆಸಿ, ಯಾವ ಹೆಣ್ಣು ತಾನೆ ಸಾರ್ವಜನಿಕವಾಗಿ ಬೆತ್ತಲಾಗುವುದಕ್ಕೆ ಪ್ರಯತ್ನ ಪಡ್ತಾಳೆ. ಹೀಗೆ ಹೇಳುವ ಮೂಲಕ ಹೆಣ್ಣು ಕುಲವನ್ನೇ ಅಪಮಾನಿಸುವ ಕೆಲಸ ಮಾಡಿದ್ದಾರೆ. ಹಾಗೆ ಹೇಳುವುದೇ ಹೆಣ್ಣು ಮಕ್ಕಳ ಮೇಲೆ ಇರುವ ಒಂದು ಕೀಳು ಭಾವನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
307 ಕೇಸ್ ಹಾಕಿರುವುದೇ ಬಾಯಿ ಮುಚ್ಚಿಸುವುದಕ್ಕೆ, ಬೆದರಿಸುವುದಕ್ಕೆ, ಯಾರು ಹಾಸ್ಪಿಟಲೈಸ್ ಆಗಿದ್ದಾರೆ, ಯಾರಿಗೆ ಮಾರಣಾಂತಿಕ ಗಾಯವಾಗಿದೆ ಅನ್ನೋದನ್ನ ಪೊಲೀಸರು ಸ್ಪಷ್ಟಪಡಿಸಬೇಕು. ನಿಮ್ಮ ಬಳಿಯೂ ಕಾಲರ್ನಲ್ಲಿ ಕ್ಯಾಮರಾ ಹಾಕೊಂಡಿರ್ತೀರಲ್ಲಾ ತೋರ್ಸಿ. ಎಲ್ಲಾ ಪೊಲೀಸರು ಎದೆಯ ಮೇಲೆ ಮೈಕ್ರೋ ಕ್ಯಾಮೆರ ಹಾಕಿಕೊಂಡಿರುತ್ತೀರಲ್ವ ತೋರಿಸಿ ಇಲ್ಲಿ ಬೆತ್ತಲಾಗುವುದಕ್ಕೆ ಪ್ರಯತ್ನಿಸಿದಳು ತೋರಿಸಿ, ಹೀಗೆ ಆರೋಪ ಮಾಡುವುದರ ಮೂಲಕ ನೀವು ಬೆತ್ತಲಾಗ್ತೀರ, ನಿಮ್ಮ ಇಲಾಖೆ ಬೆತ್ತಲಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ ಗಲಭೆ ಪ್ರಕರಣ
ಬಳ್ಳಾರಿಯಲ್ಲಿ ಎಲ್ಲವೂ ನಿಯಮ ಉಲ್ಲಂಘನೆಯಾಗಿದೆ. ಎರಡೆರಡು ಬಾರಿ ಪೋಸ್ಟ್ಮಾರ್ಟಮ್ ಆಗಿದೆ. ಅಲ್ಲಿ ಒಂದು ಸಂಚು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ನವರೇ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಮಾಡಿ ಬಿಜೆಪಿಯವರ ತಲೆಗೆ ಕಟ್ಟುವ ಕೆಲಸ ಮಾಡಿದ್ರು. ಮಾಧ್ಯಮಗಳು ವಿಡಿಯೋ ಬಿಡುಗಡೆ ಮಾಡದೇ ಇದ್ದಿದ್ದರೆ, ಸಾಕ್ಷ್ಯ ಆಗದಿದ್ರೆ ಅದನ್ನ ಬಿಜೆಪಿಯವರ ತಲೆಗೆ ಕಟ್ಟೊದಕ್ಕೆ ನೋಡಿದ್ರು, ಇದು ಬಹಳ ಆಘಾತಕಾರಿ ವಿಷಯ. ಒಂದು ಕೊಲೆಯಾದ್ರೂ ಸರ್ಕಾರ ಎಷ್ಟು ಗಂಭೀರವಾಗಿ ತೆಗೆದುಕೊಳ್ಬೇಕು ತೆಗೆದುಕೊಂಡಿಲ್ಲ ಇನ್ನೂ ಕೂಡಾ ಯಾರನ್ನೋ ರಕ್ಷಣೆ ಮಾಡುವ ರೀತಿಯಲ್ಲೇ ವರ್ತನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ ಮನೆ ಮೇಲೆ ದಾಳಿಯಾಗಿ, ಸಾವಿರಾರು ಜನ ಅಸೆಂಬಲ್ ಆಗ್ತಾರೆ. ಯಾವ್ದೇ ಪರ್ಮಿಶನ್ ಇಲ್ಲದೆ ಊರು ತುಂಬಾ ಬ್ಯಾನರ್ ಕಟ್ತಾರೆ. ಇವೆಲ್ಲವೂ ಗಲಭೆ ನಡೆಸುವ ಪೂರ್ವ ನಿಯೋಜಿತ ಸಂಚಿನ ರೂಪದಲ್ಲಿ ಭಾಸವಾಗುತ್ತೆ. ಆಗಾಗ ಸರ್ಕಾರ ನಿಸ್ಪಕ್ಷಪಾತವಾಗಿ ವರ್ತಿಸ್ತಿದೆ ಅಂತಾ ಅನಿಸ್ತಿಲ್ಲ. ಹಾಗಾಗಿ ಇದನ್ನ ಸಿಬಿಐ ತನಿಖೆಗೆ ಕೊಡಬೇಕು. ಸಿಬಿಐಗೆ ಕೊಡಬೇಕು ಅಂತಾ ಬಿಜೆಪಿ ಕೋರ್ ಕಮಿಟಿ ತೀರ್ಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಡಿಕೆಶಿಗೆ ಸಿದ್ದರಾಮಯ್ಯ ಹೆದರಿದ್ರಾ? | ಎನ್ ರವಿಕುಮಾರ್



















