ಬೀದರ್ : ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು 25ಕ್ಕೂ ಹೆಚ್ಚು ಗೋವುಗಳನ್ನು ಸ್ವತಃ ಶಾಸಕರೇ ರಕ್ಷಣೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮದ ಸಮೀಪ ನಡೆದಿದೆ.
ಬಸವಕಲ್ಯಾಣದಿಂದಾ ಅಲಗೂಡ ಚಿಟ್ಟಾ ಗ್ರಾಮದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಒಂದೆರಡಲ್ಲ ಬರೋಬ್ಬರಿ 25ಕ್ಕೂ ಹೆಚ್ಚು ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ ರಕ್ಷಣೆ ಮಾಡಿದ್ದಾರೆ. ಸುಮಾರು 3 ಗೂಡ್ಸ್ ಗಾಡಿಗಳಲ್ಲಿ 25ಕ್ಕೂ ಹೆಚ್ಚು ಗೋವುಗಳನ್ನ ಅಕ್ರಮವಾಗಿ ಸಾಗಾಟನೆ ಮಾಡಲಾಗುತ್ತಿತ್ತು. ಅದೇ ಸಮಯದಲ್ಲಿ ಶಾಸಕ ಶರಣು ಸಲಗರ ಅವರು ಗೂಡ್ಸ್ ಗಾಡಿಗಳನ್ನ ತಡೆದು ಪರಿಶೀಲನೆ ಮಾಡಿದ್ದು, ಈ ವೇಳೆ ಅಕ್ರಮವಾಗಿ ಗೋವು ಸಾಗಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನು, ಅವುಗಳಲ್ಲಿ ಒಂದು ಗೋವು ಸತ್ತು ಹೋಗಿದ್ದನ್ನು ನೋಡಿದ ಶಾಸಕರು, ಪಕ್ಕದ ರೈತರ ಜಮೀನಿನಲ್ಲೇ ಅದರ ಅಂತ್ಯಕ್ರಿಯೆ ನಡೆಸಿದ್ದಾರೆ.
ನಿಮ್ಮ ಹೆಂಡ್ತಿ ಮಕ್ಕಳನ್ನು ಕೂಡ ಇದೆ ರೀತಿ ಕರೆದುಕೊಂಡು ಹೋಗ್ತೀರಾ? ನಿಮ್ಮ ಹೊಟ್ಟೆ ಪಾಡು ಇದ್ರಿಂದಾನೆ ನಡೀತಿದೆ ಎಂದು ಗೊತ್ತು, ನಿಮ್ಮನ್ನ ಸುಮ್ಮನೆ ಬಿಡೋದಿಲ್ಲ, ಜೈಲ್ಗೆ ಕಳಿಸ್ತೀನಿ, ಅಕ್ರಮ ಗೋವು ಸಾಗಾಟನೆ ಯಾರೇ ಮಾಡ್ಲಿ ಸುಮ್ಮನಿರಲ್ಲ, ಇಂತವರ ವಿರುದ್ಧ ಕ್ರಮ ವಹಿಸ್ತೀನಿ ಅಂತ ಶಾಸಕ ಶರಣು ಸಲಗಾರ್ ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಕ್ಷಿಸಿದ ಗೋವುಗಳನ್ನು ಗೋಶಾಲೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಇನ್ಮುಂದೆ ಶಾಲೆಗಳಲ್ಲಿ ಪ್ರತಿದಿನ ಕನ್ನಡ ನ್ಯೂಸ್ ಪೇಪರ್ ಓದಿಸುವುದು ಕಡ್ಡಾಯ – ಸರ್ಕಾರ ಮಹತ್ವದ ಆದೇಶ



















