ಕುಂದಾಪುರ : ಯುವಕ ಸೇವಾದಳ ಹಾಗೂ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ, ಇವರ ಆಶ್ರಯದಲ್ಲಿ ನಲವತ್ತು ಗಜಗಳ ಕ್ರಿಕೆಟ್ ಪಂದ್ಯಾಟ “ಯುವ ಟ್ರೋಫಿ-2026” ದೇವಸ್ಥಾನದ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.
ಯುವಕ ಸೇವಾದಳದ ಕ್ರೀಡಾ ಕಾರ್ಯದರ್ಶಿ ಸಂದೀಪ್ ಆಚಾರ್ಯ ಇನ್ನಂಜೆ ಇವರ ಸಂಯೋಜನೆಯಲ್ಲಿ ಪಂದ್ಯಾಟವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಪಂದ್ಯಾಟದಲ್ಲಿ ರತನ್ ರೋಕರ್ಸ್ ಕುಂದಾಪುರ ತಂಡವು ಅದ್ಭುತ ಪ್ರದರ್ಶನ ನೀಡಿದ್ದು, ಸುಬ್ರಮಣ್ಯ ಆಚಾರ್ಯ ವಡೆರಹೋಬಳಿ ಅವರ ಸಾರಥ್ಯದಲ್ಲಿ ಹಾಗೂ ಅಶ್ವಿನ್ ಆಚಾರ್ಯ ಕುಂಭಾಶಿ ಅವರ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಹಾಗೆಯೇ ಹೇಮಂತ್ ಆಚಾರ್ಯ ಸಾರಥ್ಯದ “ಶಿವ ಸಾನಿಧ್ಯ” ಬೆಳ್ಕಳೆ ತಂಡ ದ್ವಿತೀಯ ಸ್ಥಾನ ಪಡೆಯಿತು.
ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಯುವಕ ಸೇವಾದಳ ಅಧ್ಯಕ್ಷ ಪ್ರಕಾಶ್ ಆಚಾರ್ಯ ಇನ್ನಂಜೆ ಹಾಗೂ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ ಮೊಕ್ತೇಸರ ಮುರಹರಿ ಕೆ. ಆಚಾರ್ಯ ಉಡುಪಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಕಾರ್ಯಕ್ರಮವನ್ನು ವೆಂಕಟೇಶ್ ಆಚಾರ್ಯ ನಿರೂಪಿಸಿದರು.
ಇದನ್ನೂ ಓದಿ : ರೈಲು ಪ್ರಯಾಣಿದ ವೇಳೆ ಊಟ-ತಿಂಡಿಗೆ ಹೆಚ್ಚಿನ ಹಣ ಕೇಳಿದ್ರೆ ಯಾರಿಗೆ ದೂರು ನೀಡಬೇಕು?


















