ಬೆಂಗಳೂರು : ಬೆಂಗಳೂರಿನ ನಂದಿನಿ ಲೇಔಟ್ನಲ್ಲಿರುವ ರಾಜಕುಮಾರ್ ಸ್ಮಾರಕದ ಸಮೀಪವಿರುವ ಎಲ್ಇಡಿ ಬ್ಯಾನರ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 50 ಯುವತಿಯರು ಅಪಾಯದಿಂದ ಪಾರಾಗಿದ್ದು, ಭಾರಿ ದುರಂತ ತಪ್ಪಿದೆ. ಗೋದಾಮಿನ ಪೂರ್ತಿ ಹರಡಿದ್ದ ಭಾರೀ ಬೆಂಕಿ, ಪಕ್ಕದಲ್ಲೇ ಇದ್ದ ಪಿಜಿಗೂ ಆವರಿಸಿದ್ದರಿಂದ, ಭಯಗೊಂಡ ಯುವತಿಯರು ರೂಮ್ಗಳ ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಬೆಂಕಿ ಹೊತ್ತಿಕೊಳ್ಳುವುದನ್ನು ಗಮನಿಸಿದ ತಕ್ಷಣ, ನಾಲ್ಕು ಅಂತಸ್ತಿನ ಪಿಜಿಯಲ್ಲಿ ವಾಸವಿದ್ದ ಯುವತಿಯರು ಪ್ರಾಣದ ಹಂಗು ತೊರೆದು ಕಟ್ಟಡದಿಂದ ಹೊರಗೆ ಜಿಗಿದು ಓಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿಯರು ಚೀರಾಡುತ್ತಾ ಕಟ್ಟಡದಿಂದ ಹೊರಬರುವುದು ಸ್ಪಷ್ಟವಾಗಿ ದಾಖಲಾಗಿದೆ.
ಪಿಜಿಗೂ ಬೆಂಕಿ ಆವರಿಸುತ್ತಿದ್ದಂತೆ ರೂಮ್ನಲ್ಲಿ ಯುವತಿಯರು ಜೋರಾಗಿ ಕಿರುಚಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿಯರು ಚೀರಾಡುತ್ತಾ ಕಟ್ಟಡದಿಂದ ಹೊರಬರುವುದು ದಾಖಲಾಗಿದೆ. ಕೂಗಾಟ ಕಂಡು ಸ್ಥಳೀಯರು ಸ್ಥಳಕ್ಕೆ ಬಂದು ಕೆಲವರನ್ನ ರಕ್ಷಣೆ ಮಾಡಿದ್ದಾರೆ.
ಒಟ್ಟು 27 ಮಂದಿ ಈ ಪಿಜಿ ಬಿಲ್ಡಿಂಗ್ನಲ್ಲಿ ವಾಸವಿದ್ರು ಎನ್ನಲಾಗಿದೆ. ರೂಮ್ಗಳಂತೆ ಮಾಡಿ ಯುವತಿಯರಿಗೆ ಬಾಡಿಗೆಗೆ ನೀಡಲಾಗಿತ್ತು. ಎಲ್ಲಾ ಯುವತಿಯರು ಜಾರ್ಖಂಡ್ ಮತ್ತು ಓರಿಸ್ಸಾ ಮೂಲದವರಾಗಿದ್ದಾರೆ. ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಹೋಗ್ತಿದ್ದ ಯುವತಿಯರು ಬೆಂಕಿ ಅವಘಡದಿಂದ ಸಂಕಷ್ಟಕ್ಕೆ ಸಿಲುಕಿದ್ರು. ಸದ್ಯ ಅಗ್ನಿಅವಘಡ ಹಿನ್ನಲೆ ಮಾಲೀಕರು ಪಿಜಿಗೆ ಬೀಗ ಹಾಕಿದ್ದು, ಎಲ್ಲಾ ಯುವತಿಯರನ್ನ ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೇ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ : ಯಾವ್ಯಾವ ಜಿಲ್ಲೆಯವರಿಗೆ ಬೆಲೆ ಏರಿಕೆಯ ಬಿಸಿ?


















