ಬೆಂಗಳೂರು: ಏಳನೇ ತರಗತಿ ವಿದ್ಯಾರ್ಥಿಯ ಮೇಲೆ ಕೈನಿಂದ ಕೆನ್ನೆಗೆ ಬಾರಿಸಿದ ಆರೋಪದಡಿ ಬೆಂಗಳೂರಿನಲ್ಲಿ ಖಾಸಗಿ ಶಾಲೆಯ ಪಿಟಿ ಟೀಚರ್ ಮೇಲೆ ಎಫ್ಐಆರ್ ದಾಖಲಾಗಿದೆ.

ರಾಜೇಶ್ ಹಲ್ಲೆ ಮಾಡಿದ ಖಾಸಗಿ ಶಾಲೆಯ ಟೀಚರ್ . ಸ್ಟಾಫ್ ರೂಮ್ನಲ್ಲಿ ಶಿಕ್ಷಕರ ಮುಂದೆ ಶಿಕ್ಷಕ ರಾಜೇಶ್ ಹಲ್ಲೆ ನಡೆಸಿದ ಹಿನ್ನಲೆ ಬಾಲಕನ ಕೆನ್ನೆ ಉದಿಕೊಂಡಿದೆ. ಮಗ ಮನೆಗೆ ಬಾರದ ಕಾರಣ ಬಾಲಕನ ತಂದೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಲೆಯಲ್ಲಿ ಏನೋ ತಪ್ಪು ಮಾಡಿದಕ್ಕೆ ಹೊಡೆದಿರುವುದು ತಂದೆಯ ಗಮನಕ್ಕೆ ಬಂದಿದೆ.
ನಂತರ ಶಾಲೆಯಿಂದ ಬಾಲಕನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಬಾಲಕನ ತಂದೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಸದ್ಯ ಶಿಕ್ಷಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಒಂದೇ ಘಟಿಕೋತ್ಸವದಲ್ಲಿ ಬರೋಬ್ಬರಿ 13 ಚಿನ್ನದ ಪದಕಗಳಿಸಿದ ಕೊಪ್ಪಳದ ಯುವಕ | ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಸುರಿಮಳೆ!


















