ಬೆಂಗಳೂರು : ಕೆಪಿಎಸ್ಸಿ ಪರೀಕ್ಷಾ ಅಕ್ರಮದ ಆರೋಪಗಳ ಬೆನ್ನಲ್ಲೇ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷಾ ಅಕ್ರಮದ ಹಣದಲ್ಲಿ ಜ್ಞಾನೇಂದ್ರ ಮೋಜು-ಮಸ್ತಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಆತನನ್ನು ಸೆಳೆಯಲು ಕನ್ನಾಳೆ ದುಬಾರಿ ಉಡುಗೊರೆ ಹಾಗೂ ಪ್ರವಾಸದ ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ.
ಜ್ಞಾನೇಂದ್ರ ಹಾಗೂ ಆತನ ಗೆಳತಿ ಸುತ್ತಾಡಲು ಕನ್ನಾಳೆ ಬರೋಬ್ಬರಿ 23 ಏರ್ ಟಿಕೆಟ್ಗಳನ್ನು ಬುಕ್ ಮಾಡಿದ್ದ ಎನ್ನಲಾಗಿದ್ದು, ವಿವಿಧ ಖರ್ಚುಗಳಿಗಾಗಿ ₹11 ಲಕ್ಷ ಹಣವನ್ನೂ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದಲ್ಲದೆ, ಜ್ಞಾನೇಂದ್ರ ತನ್ನ ಗೆಳತಿಗಾಗಿ ₹52 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಿದ್ದಾನೆ ಎನ್ನಲಾಗಿದೆ. ಬೀದರ್ನ ಭಗವತಿ ಎಂಟರ್ಪ್ರೈಸಸ್ ಮೂಲಕ ಏರ್ ಟಿಕೆಟ್ಗಳನ್ನು ಬುಕ್ ಮಾಡಲಾಗಿದ್ದು, ಈ ಸಂಸ್ಥೆಯ ಮಾಲೀಕರೇ ಕನ್ನಾಳೆ ಎಂದು ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಜ್ಞಾನೇಂದ್ರನನ್ನು ತನ್ನತ್ತ ಸೆಳೆಯಲು ಕನ್ನಾಳೆ ಈ ರೀತಿಯ ದುಬಾರಿ ಗಿಫ್ಟ್ಗಳು ಹಾಗೂ ಪ್ರವಾಸದ ವ್ಯವಸ್ಥೆ ಮಾಡಿದ್ದ ಎನ್ನುವ ಆರೋಪ ಇದೀಗ ಚರ್ಚೆಗೆ ಬಂದಿದೆ. ಕೆಪಿಎಸ್ಸಿ ಪರೀಕ್ಷಾ ಅಕ್ರಮದ ಪ್ರಕರಣದಲ್ಲಿ ಈ ಹಣದ ವಹಿವಾಟು ಹಾಗೂ ಉಡುಗೊರೆಗಳ ಹಿನ್ನೆಲೆಯ ಬಗ್ಗೆಯೂ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿಬಂದಿದೆ.
ಇದನ್ನೂ ಓದಿ : ರಸ್ತೆಯಲ್ಲೇ ಚರಂಡಿ ನೀರು, ಕೊಚ್ಚೆಯಲ್ಲೇ ನಿತ್ಯ ಓಡಾಟ ; ದೂಪದಹಳ್ಳಿ ಜನರ ಆಕ್ರೋಶ!


















