ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿರುವುದು ಬಹಿರಂಗವಾಗುತ್ತಿರುವಂತೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈ ಮಧ್ಯೆ ಟಿವಿ ಬೇಕು ಎನ್ನುವ ಕುರಿತು ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಬಳ್ಳಾರಿ ಜೈಲಿನ ಸಿಬ್ಬಂದಿಯು ದರ್ಶನ್ ಗೆ ಸಲಹೆ ನೀಡಿದ್ದಾರೆ. ಟಿವಿಯ ಅವಶ್ಯಕತೆ ಇದೆ ಎಂದಾದರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಹೈ-ಸೆಕ್ಯುರಿಟಿ ಸೆಲ್ ಗೆ ಊಟ ನೀಡುವ ವೇಳೆ ಈ ಮಾತುಕತೆ ನಡೆದಿದೆ. ಆದರೆ, ಅದರ ಸಹವಾಸವೇ ಬೇಡ ಎನ್ನುವ ರೀತಿ ದರ್ಶನ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರು ಸದ್ಯಕ್ಕೆ ಟಿವಿ ಬೇಕು ಎಂಬ ಬೇಡಿಕೆ ಇಟ್ಟಿಲ್ಲ. ಯೋಗ, ವಾಕ್ ಹಾಗೂ ಪುಸ್ತಕದ ಕಡೆಗೆ ಮಾತ್ರ ಅವರು ಗಮನ ಹರಿಸುತ್ತಿದ್ದಾರೆ. ದರ್ಶನ್ ಇರುವ ಅಕ್ಕಪಕ್ಕದ ಸೆಲ್ ಗಳು ಖಾಲಿ ಆಗಿವೆ. ಹೀಗಾಗಿ ದರ್ಶನ್ ಜೈಲಿನಲ್ಲಿ ದರ್ಶನ್ ಅಕ್ಷರಶಃ ಏಕಾಂಗಿ ಆಗಿದ್ದಾರೆ. ಬಳ್ಳಾರಿಗೆ ಶಿಫ್ಟ್ ಆದ ಬಳಿಕ ದರ್ಶನ್ ಮುಖ ಬಾಡಿದೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ತಮ್ಮ ಪ್ರಭಾವ ಬಳಸಿ ದರ್ಶನ್ ಹಲವು ಸೌಕರ್ಯ ಪಡೆದುಕೊಂಡಿದ್ದರು. ಮೊಬೈಲ್, ಸಿಗರೇಟ್, ಚೇರ್, ರೌಡಿಶೀಟರ್ಗಳ ಜೊತೆ ಹರಟೆ. ಆದರೆ ಬಳ್ಳಾರಿ ಜೈಲಿನಲ್ಲಿ ಇಂಥದ್ದಕ್ಕೆಲ್ಲ ಅವಕಾಶ ಸಿಗುತ್ತಿಲ್ಲ.