ಹುಬ್ಬಳ್ಳಿ: ಮೌಲ್ವಿಯೊಬ್ಬ ಹೂತಿಟ್ಟ ಕೋತಿಯ ಮೃತ ದೇಹ ಹೊರ ತೆಗೆಯಲು ಯತ್ನಿಸಿದ್ದು, ಗ್ರಾಮಸ್ಥರು ವಿರೋಧಿಸಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೌಲ್ವಿ ಇಮಾಮ್ ಸಾಬ್ ತಡಸ ಎಂಬಾತನಿಂದ ಈ ಕೃತ್ಯ ನಡೆಯುತ್ತಿದ್ದಾಗ, ನೋಡಿದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಹೂತಿಟ್ಟಿದ್ದ ಕೋತಿ ಮೃತದೇಹವನ್ನು ತಗೆಯುವ ಸಂದರ್ಭದಲ್ಲಿ ಗ್ರಾಮಸ್ಥರು ವಿರೋಧಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ತಬ್ಬಿಬ್ಬಾದ ಮೌಲ್ವಿ ಇಮಾಮ್ ಸಾಬ್, ‘ಔಷಧಿಗಾಗಿ ಕೋತಿ ಬೇಕು’ ಎಂದು ಹೇಳಿದ್ದಾನೆ. ಸದ್ಯ ಈತನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.