ಬೆಂಗಳೂರು : ನೀವು ವಿಜಯಪುರ ಜಿಲ್ಲೆಯವರಾ? ನಿಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 55 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಗಳ ಸಂಕ್ಷಿಪ್ತ ಮಾಹಿತಿ
ನೇಮಕಾತಿ ಸಂಸ್ಥೆಯ ಹೆಸರು: ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ
ಹುದ್ದೆಯ ಹೆಸರು: ಉಪನ್ಯಾಸಕರು ಇತ್ಯಾದಿ
ಉದ್ಯೋಗ ಸ್ಥಳ: ಸಿಂದಗಿ
ಸಂದರ್ಶನದ ದಿನಾಂಕ: ಮೇ 26, 27
ಸಂದರ್ಶನ ನಡೆಯುವ ಸ್ಥಳ: ಶ್ರೀ ಸಾರಂಗಮಠ, ಗೋಲಗೇರಿ ರಸ್ತೆ, ಸಿಂದಗಿ.
ಇಂಗ್ಲಿಷ್, ಕನ್ನಡ, ಭೌತಶಾಸ್ತ್ರ, ವಿಜ್ಞಾನ, ಗಣಿತ, ಕಾಮರ್ಸ್, ಜೀವಶಾಸ್ತ್ರ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿ ಹಲವು ವಿಭಾಗಗಳಲ್ಲಿ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವುಗಳ ಜತೆಗೆ ಲ್ಯಾಬ್ ಅಸಿಸ್ಟಂಟ್, ಕಂಪ್ಯೂಟರ್ ಆಪರೇಟರ್, ಡಿ ಗ್ರೂಫ್ ಹುದ್ದೆಗಳನ್ನೂ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಬಿ.ಎ ಬಿ.ಎಡ್, ಎಂ.ಎ ಎಂ.ಎಡ್, ಬಿಎಸ್ಸಿ ಬಿ.ಎಡ್, ಎಂಎಸ್ಸಿ ಎಂ.ಎಡ್, ಬಿಇ ಅಥವಾ ಎಂ.ಟೆಕ್ ಕೋರ್ಸ್ ಮುಗಿಸಿದವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ತಿಳಿಸಲಾಗಿದೆ.
ಸಂದರ್ಶನವು ಮೇ 26 ಹಾಗೂ 27ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯುತ್ತದೆ. ಸಂದರ್ಶನಕ್ಕೆ ಹಾಜರಾಗುವವರು ರೆಸ್ಯೂಮ್, ಶೈಕ್ಷಣಿಕ ದಾಖಲೆಗಳು, ಆಧಾರ್ ಕಾರ್ಡ್, ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೊಗಳನ್ನು ತೆಗೆದುಕೊಂಡು ಬರಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ‘ಧೋನಿ ಎಂದರೆ CSK, ಅವರ ನಿವೃತ್ತಿಗೆ ಆತುರ ಬೇಡ’ ; ಟೀಕಾಕಾರರಿಗೆ ಮೈಕಲ್ ಕ್ಲಾರ್ಕ್ ಖಡಕ್ ಎಚ್ಚರಿಕೆ!



















