ಬೆಂಗಳೂರು : ದಕ್ಷಿಣ ಭಾರತದ ಏಕೈಕ ಬೆಟ್ಟದ ಓಟ (ಹಿಲ್ ರನ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ದಿವ್ಯಶ್ರೀ ನಂದಿ ಮಾನ್ಸೂನ್ ರನ್’ (DNMR) ನ ಎರಡನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES), ಜೆಜೆ ಆಕ್ಟಿವ್ ಹಾಗೂ ದಿವ್ಯಶ್ರೀ ಸಂಸ್ಥೆಗಳು ಜಂಟಿಯಾಗಿ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿವೆ. ಭಾನುವಾರ, ಆಗಸ್ಟ್ 9, 2026ರಂದು ನಂದಿಬೆಟ್ಟದ ರಮಣೀಯ ಪರಿಸರದಲ್ಲಿ ಈ ಓಟ ನಡೆಯಲಿದ್ದು, ಕ್ರೀಡಾಪಟುಗಳು ಮೋಡಗಳ ನಡುವೆ ಓಡುವ ‘ಮಾನ್ಸೂನ್ ಮ್ಯಾಜಿಕ್’ ಅನ್ನು ಅನುಭವಿಸಲಿದ್ದಾರೆ.
2025ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಬೆಂಗಳೂರಿನಿಂದಲೇ ಸುಮಾರು 3,000 ಓಟಗಾರರು ಪಾಲ್ಗೊಂಡು ಯಶಸ್ವಿಗೊಳಿಸಿದ್ದರು. ಹೀಗಾಗಿ ಈ ವರ್ಷ ಕ್ರೀಡಾಕೂಟದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ದೇಶಾದ್ಯಂತ ಸುಮಾರು 6,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.
ಪರಿಸರ ಸ್ನೇಹಿ ಕ್ರೀಡಾಕೂಟ:
ಈ ಓಟದ ಪ್ರಮುಖ ಆಕರ್ಷಣೆಯೆಂದರೆ ಅದರ ಸುಸ್ಥಿರತೆಯ ಗುರಿ. ಇದೊಂದು ಸಂಪೂರ್ಣ ‘ಪ್ಲಾಸ್ಟಿಕ್-ಮುಕ್ತ’ ಹಾಗೂ ‘ಶೂನ್ಯ ತ್ಯಾಜ್ಯ’ (Zero-waste) ಕ್ರೀಡಾಕೂಟವಾಗಿದೆ. ಸ್ಪರ್ಧಿಗಳು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ತರಬೇಕು. ಬಿಸಾಡಬಹುದಾದ (ಡಿಸ್ಪೋಸಬಲ್) ಕಪ್ಗಳನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೊತೆಗೆ, ಸಾರ್ವಜನಿಕ ಸಾರಿಗೆ ಅಥವಾ ‘ಕಾರ್ ಪೂಲಿಂಗ್’ ಬಳಸಲು ಉತ್ತೇಜಿಸುವ ‘ಗ್ರೀನ್ ವಾರಿಯರ್ ಪ್ರೋಗ್ರಾಂ’ ಅನ್ನು ಪರಿಚಯಿಸಲಾಗಿದೆ. ಓಟಗಾರರು ಬೆಂಗಳೂರಿನಿಂದ ತೆರಳಲು ಶಟಲ್ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಎರಡು ವಿಭಾಗಗಳಲ್ಲಿ ಓಟ:
ಈ ಬಾರಿಯ ಕ್ರೀಡಾಕೂಟದಲ್ಲಿ ಕಳೆದ ವರ್ಷದಂತೆಯೇ ಎರಡು ವಿಭಾಗಗಳಿವೆ. ಈ ಎರಡೂ ಓಟದ ಮಾರ್ಗಗಳಿಗೆ ‘ವರ್ಲ್ಡ್ ಅಥ್ಲೆಟಿಕ್ಸ್’ ಸಂಸ್ಥೆಯ ಮಾನ್ಯತೆ ದೊರೆತಿದೆ.
- ಹಾಫ್ ಮ್ಯಾರಥಾನ್ (21.1 ಕಿ.ಮೀ) : 530 ಮೀಟರ್ ಏರಿಕೆ ಇರುವ ಈ ಓಟ ಬೆಳಗ್ಗೆ 6:30ಕ್ಕೆ ಆರಂಭವಾಗಲಿದೆ.
- 10K ಓಟ (10 ಕಿ.ಮೀ) : 191 ಮೀಟರ್ ಏರಿಕೆ ಇರುವ ಈ ಓಟ ಬೆಳಗ್ಗೆ 7:00 ಗಂಟೆಗೆ ಶುರುವಾಗಲಿದೆ.
- ಸ್ಥಳ : ನಂದಿಬೆಟ್ಟದ ತಪ್ಪಲಿನಲ್ಲಿರುವ ದಿವ್ಯಶ್ರೀ ‘ವಿಸ್ಪರ್ಸ್ ಆಫ್ ದಿ ವಿಂಡ್’ (Whispers of the Wind) ನಿಂದ ಓಟ ಶುರುವಾಗಿ ಅಲ್ಲಿಗೇ ಅಂತ್ಯಗೊಳ್ಳಲಿದೆ.
ಯುವಜನರನ್ನು ಕ್ರೀಡೆಯತ್ತ ಸೆಳೆಯುವ ಯತ್ನ :
ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಿಂಗ್, “ಈ ಓಟವು ಯುವಜನರನ್ನು ಫಿಟ್ನೆಸ್ನತ್ತ ಸೆಳೆಯುವುದರ ಜೊತೆಗೆ, ಬೃಹತ್ ಕಾರ್ಯಕ್ರಮಗಳನ್ನು ಪರಿಸರ ಕಾಳಜಿಯೊಂದಿಗೆ ಹೇಗೆ ನಡೆಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಇದು ರಾಜ್ಯದ ಪ್ರಮುಖ ಕ್ರೀಡಾ-ಪ್ರವಾಸೋದ್ಯಮ ಕಾರ್ಯಕ್ರಮವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ” ಎಂದರು.
ದಿವ್ಯಶ್ರೀ ಡೆವಲಪರ್ಸ್ನ ಪ್ರೋಗ್ರಾಂ ಡೈರೆಕ್ಟರ್ ರುಚಿಕಾ ಭಾಸ್ಕರ್ ರಾಜು ಮಾತನಾಡಿ, “ಪ್ರಕೃತಿ ಮತ್ತು ಸಮುದಾಯವನ್ನು ಬೆಸೆಯುವುದು ಡಿಎನ್ಎಂಆರ್ ಉದ್ದೇಶ. ಇದನ್ನು ಭಾರತದ ಪ್ರಮುಖ ಲ್ಯಾಂಡ್ಮಾರ್ಕ್ ರನ್ ಆಗಿ ಬೆಳೆಸುವ ಗುರಿ ನಮ್ಮದು” ಎಂದು ವಿವರಿಸಿದರು.
“ಬೆಂಗಳೂರಿನ ಓಟಗಾರರ ಸಮುದಾಯವನ್ನು ಮತ್ತಷ್ಟು ಗಟ್ಟಿಗೊಳಿಸಲು, ಅತ್ಯಂತ ಸುರಕ್ಷಿತವಾಗಿ ಈ ವಿಶ್ವದರ್ಜೆಯ ಓಟವನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಜೆಜೆ ಆಕ್ಟಿವ್ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಮೋದ್ ದೇಶಪಾಂಡೆ ತಿಳಿಸಿದ್ದಾರೆ.
ನೋಂದಣಿ ಆರಂಭ:
ದಿವ್ಯಶ್ರೀ ನಂದಿ ಮಾನ್ಸೂನ್ ರನ್ 2026ರ ನೋಂದಣಿ ಪ್ರಕ್ರಿಯೆ ಈಗಾಗಲೇ ಅಧಿಕೃತವಾಗಿ ಆರಂಭವಾಗಿದೆ. ಆಸಕ್ತ ಓಟಗಾರರು https://dnmr.co.in/ ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ : ನೇಪಾಳದಲ್ಲಿ ಮತ್ತೆ ಪ್ರತಿಭಟನೆಗಳ ಹವಾ : ಅಧಿಕಾರಕ್ಕೆ ಬಂದ ತಿಂಗಳಲ್ಲೇ ಬಾಲೆನ್ ಶಾ ಸರ್ಕಾರಕ್ಕೆ ತಟ್ಟಿದ ಬಿಸಿ


















