ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನೆಪದಲ್ಲಿ ವಿಧಾನ ಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶಕ್ಕೆ ಅಬ್ದುಲ್ ಜಬ್ಬಾರ್ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದು, ಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಪಕ್ಷದಿಂದ ಅಮಾನತುಗೊಂಡ ನಂತರ ಇಂದು ಸುದ್ದಿಗಾರರೊಂದಿಗೆ ಅಬ್ದುಲ್ ಜಬ್ಬಾರ್ ಮಾತನಾಡಿ, ನನಗೆ ಇಲ್ಲಿವರೆಗೆ ಏನು ಬಂದಿಲ್ಲ. ಬಂದ ನಂತರ ಉತ್ತರ ಕೊಡ್ತೇನೆ. ನಿಮ್ಮ ಮುಖಾಂತರವೇ ಗೊತ್ತಾಗಿದೆ. ಪತ್ರ ಬರಲಿ ಬಂದ ನಂತರ ಉತ್ತರ ನೀಡ್ತೇನೆ ಎಂದಿದ್ದಾರೆ.
ಯಾವುದಾದರೂ ದಾಖಲೆ ಇದ್ರೆ ತೋರಿಸಲಿ. ಅಡಿಯೋ, ವಿಡಿಯೋ ಇದ್ರೆ ತೋರಿಸಲಿ. ಒಬ್ಬರಿಗೊಂದು ಇನ್ನೊಬ್ನರಿಗೊಂದು ಮಾಡ್ತಾರೆ. ಹಿಂದೆ ಏನೆಲ್ಲ ಆಗಿದೆ, ಅದನ್ನೇ ಬಿಟ್ಟಿದ್ದಾರೆ. ನಾನೇ ಖುದ್ದಾಗಿ ರಾಜೀನಾಮೆ ನೀಡಿದ್ದೇನೆ. ಅಲ್ಲಿನ ಮುಖಂಡರು ಆಗಲಿ, ಅಭ್ಯರ್ಥಿ ಆಗಲಿ ಯಾರು ಕೂಡ ಬಂದು ಮಾತನಾಡಿಸಿಲ್ಲ ಹಾಗಾಗೀ ನಾನೇ ರಾಜೀನಾಮೆ ನೀಡಿದ್ದೇನೆ. ಇದರಲ್ಲಿ ಯಾರು ರಾಜೀನಾಮೆ ಕೊಡು ಅಂದಿಲ್ಲ ಎಂದು ಕಿಡಿಕಾರಿದ್ದಾರೆ.
ಸಿಎಂ ಬಣದ ನಾಯಕರೇ ಟಾರ್ಗೆಟ್ ಅಂತಲ್ಲ. ಎಲ್ಲವೂ ಆಕಸ್ಮಿಕವಾಗಿ ಆಗಿದ್ಯಾ ಅದು ಗೊತ್ತಿಲ್ಲ. ಇಲ್ಲಿ ಟಿಕೆಟ್ ಯಾರು ಕೊಟ್ಟರು ಅಲ್ವಾ. ಆವತ್ತು ಡಯಾಸ್ ಮೇಲೆ ನಿಂತು ಬಿಜೆಪಿ ಗೆಲ್ಲಿಸಿ ಅಂದ್ರು, ಅದಕ್ಕೆ ಯಾಕೆ ಯಾವ ಕ್ರಮ ತೆಗೆದುಕೊಂಡಿಲ್ಲ. ನಾನು ಮೊದಲು ವಿಚಾರ ಏನು ಅಂತಾ ನೋಡ್ತೇನೆ. ಯಾಕೆ ಈ ಕ್ರಮ ಅಂತಾ ತಿಳಿದುಕೊಳ್ತೇನೆ ನಂತರ ಪಾರ್ಟಿಗೂ ನಿಮ್ಮಗೂ ಉತ್ತರ ನೀಡ್ತೇನೆ ಎಂದಿದ್ದಾರೆ.
ಚುನಾವಣೆವರೆಗೂ ನಾವೆಲ್ಲ ಒಟ್ಟಿಗೆ ಇದ್ದೆವು. ಶಿವಶಂಕರಪ್ಪ ತೀರಿಕೊಂಡ ನಂತರ ನಾವೆಲ್ಲ ಯಾಕೆ ಅವರಿಗೆ ಟಿಕೆಟ್ ಕೊಡಬೇಕು ಬೇರೆಯವರಿಗೆ ಒಂದು ಅವಕಾಶ ನೀಡಿ ಅಂದ್ವಿ. ಒಂದು ವೇಳೆ ಅಲ್ಪಸಂಖ್ಯಾತರಿಗೆ ಕೊಡಲಿಲ್ಲ ಅಂದ್ರೆ ಬೇರೆ ಸಮುದಾಯಕ್ಕೆ ಕೊಡಿ ಅಂತಾ ಪತ್ರಯಿತ್ತು ಎಂದು ತಿಳಿಸಿದ್ದಾರೆ.
ಯಾಕೆ ಈ ನಿರ್ಧಾರ ತೆಗೆದುಕೊಂಡ್ತು ಗೊತ್ತಿಲ್ಲ 40ವರ್ಷದಿಂದ ಪಕ್ಷದಲ್ಲಿ ಇದ್ದೇನೆ. ಮೂರನೇ ಬಾರಿಗೆ ಎಂಎಲ್ಸಿ ಆಗಿದ್ದೇನೆ. ನಾವು ಮುಂಚೂಣಿ ನಾಯಕರು ಇದ್ವಿ. ಈಗ ಬೇರೆ ಕುದುರೆಗಳು ರೇಸ್ಗೆ ಬಂದಿದೆ ಈಗ ಅವರ ಕುದುರೆಗಳು ಮುಂದೆ ಇವೆ ಎಂದು ಹರಿಹಾಯ್ದಿದ್ದಾರೆ.
ಇನ್ನು, ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂಬ ಜಮೀರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಇಲ್ಲಿ ಡಿಕೆಶಿ, ಸಿದ್ದರಾಮಯ್ಯ ಪ್ರಶ್ನೆ ಅಂತಾಲ್ಲ.ಆವತ್ತು ಡಯಾಸ್ ಮೇಲೆ ಬಹಿರಂಗವಾಗಿ ಬಿಜೆಪಿ ಬೆಂಬಲಿತವಾಗಿ ಮಾತನಾಡಿದ್ದ ಅವರಿಗೆ ಯಾವುದೇ ಕ್ರಮ ಆಗಿಲ್ಲ ಅನ್ನೋದೇ ಪ್ರಶ್ನೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೀದರ್ ವಿಮಾನಯಾನ ಸೇವೆ ಸ್ಥಗಿತ – ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ



















