ಬೆಂಗಳೂರು : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ವ್ಯಾಪ್ತಿಯಲ್ಲಿ ಮಳಿಗೆಗಳ ಹಸ್ತಾಂತರ ಮತ್ತು ಲೈಸೆನ್ಸ್ ನವೀಕರಣ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವನಂದ ಪಾಟೀಲ್ ಹಾಗೂ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ವಿರುದ್ಧ ದೂರು ಸಲ್ಲಿಸಲಾಗಿದೆ.

ದೂರುದಾರರ ಪ್ರಕಾರ, ನಕಲಿ ವಿಳಾಸಗಳನ್ನು ಹೊಂದಿರುವ ಟ್ರೇಡರ್ಸ್ಗಳಿಗೆ ನಿಯಮ ಉಲ್ಲಂಘಿಸಿ ಲೈಸೆನ್ಸ್ ನೀಡಲಾಗಿದೆ. ಯಾವುದೇ ಪೂರ್ವಾಪರ ಪರಿಶೀಲನೆ ನಡೆಸದೇ ಅನಧಿಕೃತವಾಗಿ ಲೈಸೆನ್ಸ್ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿ ಕಿಕ್ಬ್ಯಾಕ್ ಪಡೆದಿರುವ ಸಾಧ್ಯತೆಯೂ ಉಲ್ಲೇಖಿಸಲಾಗಿದೆ. ಲಂಚದ ಆಧಾರದ ಮೇಲೆ ಮಳಿಗೆ ಹಸ್ತಾಂತರ ಮತ್ತು ಲೈಸೆನ್ಸ್ ನವೀಕರಣ ನಡೆದಿದೆ ಎಂದು ವರ್ತಕರು ದೂರಿದ್ದಾರೆ.
ಇದರ ಜೊತೆಗೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು, ವಿಡಿಯೋಗಳು ಹಾಗೂ ಪೆನ್ ಡ್ರೈವ್ಗಳನ್ನು ಲೋಕಯುಕ್ತಗೆ ಹಸ್ತಾಂತರಿಸಲಾಗಿದೆ ಎಂದು ದೂರುದಾರ ಅರುಣ್ ಪರಮೇಶ್ವರ ಆರೋಪ ಮಾಡಿದ್ದಾರೆ. ಇದೆ ವಿಷಯಕ್ಕೆ ಸಂಬಂಧಿಸಿದಂತೆ ಎಪಿಎಂಸಿ ವರ್ತಕರು ರಾಜ್ಯಪಾಲರಿಗೂ ದೂರು ಸಲ್ಲಿಸಿರುವುದು ತಿಳಿದುಬಂದಿದೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಎಪಿಎಂಸಿ ವರ್ತಕರು ಮಾನವಿ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್


















