ಬೆಂಗಳೂರು : ವಾಹನಗಳ ಚಾಲಕರ ಬಳಿ ಲಂಚ ಪಡೆಯುತ್ತಿದ್ದ ಬೆಂಗಳೂರು ಹೊರವಲಯ ನೆಲಮಂಗಲದ ಇಬ್ಬರು ಆರ್ಟಿಓ (RTO) ಇನ್ಸ್ಪೆಕ್ಟರ್ಸ್ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಡಾ.ಕೋನ ವಂಶಿ ಕೃಷ್ಣ ನೇತೃತ್ವದಲ್ಲಿ ಟ್ರ್ಯಾಪ್ ಮಾಡಲಾಗಿದೆ. ನೆಲಮಂಗಲ ಆರ್ಟಿಓ ಇನ್ಸ್ಪೆಕ್ಟರ್ ದಿನೇಶ್ ಹಾಗೂ ಕಿರಣ್ ಮತ್ತೊಬ್ಬ ಖಾಸಗಿ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಆರ್ಟಿಓ ಇನ್ಸ್ಪೆಕ್ಟರ್ಗಳಾದ ದಿನೇಶ್ ಹಾಗೂ ಕಿರಣ್ ನೈಸ್ ಎಂಟ್ರಿ ಮತ್ತು ನಿಗದಿತ ತೂಕಕ್ಕಿಂತ ಅಧಿಕ ಲೋಡ್ ತುಂಬಿದ್ದ ಲಾರಿಗಳನ್ನು ಅಡ್ಡಗಟ್ಟಿ ಪರೀಶಿಲನೆ ನೆಡೆಸುತ್ತಿದ್ದರು. ಈ ವೇಳೆ 30 ಸಾವಿರ ಹಣ ಲಂಚಕ್ಕೆ ಬೇಡಿಕೆ ಇಟ್ಟು 2000 ಸಾವಿರ ಫೋನ್ ಪೇ, ಒಂದು ಸಾವಿರ ಕ್ಯಾಶ್ ಹಾಗೂ 300 ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಈ ಇಬ್ಬರು ಆರ್ಟಿಓ ಇನ್ಸ್ಪೆಕ್ಟರ್ಗಳು ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತ ಚಾಲಕರ ಬಳಿ ಲಂಚ ಪಡೆದು ಕಳುಹಿಸುತ್ತಿದ್ದಾರೆ ಎಂಬ ದೂರು ಸಂಬಂಧ ಮಾಹಿತಿ ಆಧಾರದ ಮೇರೆಗೆ ಲೋಕಾ ಅಧಿಕಾರಿಗಳು ಮೂವರನ್ನು ಏಕಕಾಲಕ್ಕೆ ಟ್ರ್ಯಾಪ್ ಮಾಡಿ ವಿಚಾರಣೆಗೊಳಪಡಿಸಿದೆ.
ಇದನ್ನೂ ಓದಿ : ಹರಿಯಾಣ ವೇತನ ಪರಿಷ್ಕರಣೆ ಬೆನ್ನಲ್ಲೇ ನೋಯ್ಡಾದಲ್ಲಿ ಭುಗಿಲೆದ್ದ ಕಾರ್ಮಿಕರ ಆಕ್ರೋಶ!



















