ಮಂಡ್ಯ : ಗೋ ಶಾಲೆಗೆ ನುಗ್ಗಿ ಹಸುವನ್ನು ಚಿರತೆ ಕೊಂದಿರುವ ಘಟನೆ ಮಂಡ್ಯದ ಪಾಂಡವಪುರದ ಮೇಲುಕೋಟೆಯಲ್ಲಿ ನಡೆದಿದೆ.
ಮೇಲುಕೋಟೆಯ ಶ್ರೀನಿವಾಸ್ ಅಯ್ಯಂಗಾರ್ ಎಂಬುವವರಿಗೆ ಸೇರಿದ ಗೋಶಾಲೆ ಇದಾಗಿದ್ದು, ಚಿರತೆಯು ಹಸುವನ್ನು ಎಳೆದು ತಂದು ಬಾಗಿಲಲ್ಲಿ ರಕ್ತ ಹೀರುತ್ತಿದ್ದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಚಿರತೆ ಮೇಲೆ ಟಾರ್ಚ್ ಬಿಟ್ಟು ಚಿರತೆ ಓಡಿಸುವ ಪ್ರಯತ್ನ ಮಾಡಿದ್ದು, ಟಾರ್ಚ್ ಲೈಟ್ನ ಕಿರಿಕಿರಿಯಿಂದ ಬೇಟೆ ಬಿಟ್ಟು ಚಿರತೆಯು ಕಾಡಿನತ್ತ ತೆರಳಿದೆ ಎನ್ನಲಾಗಿದೆ.
ಈ ಚಿರತೆ ದಾಳಿಯ ಸುದ್ದಿಯಿಂದ ಗ್ರಾಮದಲ್ಲಿ ಆತಂಕ ಉಂಟು ಮಾಡಿದೆ ಎನ್ನಲಾಗಿದೆ. ಚಿರತೆ ಸೆರೆಗೆ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಮೇಲುಕೋಟೆ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಿಯಂತ್ರಣ ತಪ್ಪಿ ಹೈವೇಯಲ್ಲಿ ಸ್ಕಿಡ್ ಆದ ಕಾರು : ನಾಲ್ವರು ಜಸ್ಟ್ ಮಿಸ್


















