ಉಡುಪಿ: ಕೃಷ್ಣನಗರಿ ಉಡುಪಿ ನಗರದಲ್ಲಿ ವರುಣ ದೇವ ತಂಪು ಎರಗಿಸಿದ ನಡುವೆಯೇ ಶ್ರೀ ಕೃಷ್ಣ ಮಠದ ರಥೋತ್ಸವ ಭಕ್ತಿಭಾವದಿಂದ ನೆರವೇರಿತು.
ಉಡುಪಿ ಕೃಷ್ಣಮಠದಲ್ಲಿ ನಡೆದ ರಥೋತ್ಸವಕ್ಕೆ ಮಳೆಯ ನಡುವೆಯೂ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿ, ಗೋವಿಂದನ ನಾಮ ಸ್ಮರಣೆ ಮಾಡುತ್ತಾ ಭಕ್ತಿಯಲ್ಲಿ ತೇಲಿದರು.
ಮಳೆ ಸುರಿಯುತ್ತಿದ್ದರೂ ಭಕ್ತರ ಉತ್ಸಾಹಕ್ಕೆ ಯಾವುದೇ ಕಡಿವಾಣ ಇರಲಿಲ್ಲ. ರಥವನ್ನು ಎಳೆಯುತ್ತಾ “ಗೋವಿಂದಾ… ಗೋವಿಂದಾ…” ಎಂಬ ಘೋಷಣೆಗಳು ಗಗನಮುಟ್ಟಿದವು. ವಿಶೇಷ ಪೂಜೆಗಳೊಂದಿಗೆ ರಥೋತ್ಸವ ನಡೆಯಿದ್ದು, ಮಳೆಯ ತಂಪಿನಲ್ಲಿ ಭಕ್ತರು ಆತ್ಮೀಯವಾಗಿ ಭಾಗವಹಿಸಿದ ದೃಶ್ಯ ಮನಮೋಹಕವಾಗಿತ್ತು.



















