ಯಾದಗಿರಿ : ಆಲಿಕಲ್ಲು ಮಳೆ ಗಿರಿನಾಡಿ ರೈತರು ಕಂಗಾಲಾಗಿ ಹೋಗಿದ್ದಾರೆ,. ಬಿಸಿಲಿನ ಬೇಗೆಯಿಂದ ಕಂಗೆಟ್ಟು ಹೋಗಿದ್ದ ಯಾದಗಿರಿ ಜಿಲ್ಲೆಯ ಜನರಿಗೆ ನಿನ್ನೆ ರಾತ್ರಿಯ ವರುಣ ಆರ್ಭಟದಿಂದ ತಂಪೇರದಂತಾಗಿದೆ ಆದರೆ ಹಲವೆಡೆ ಬತ್ತ, ಸೇರಿ ಹಲವು ಬೆಳೆಗಳು ಹಾನಿಯಾಗಿವೆ,
ವಡಗೇರಾ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಭತ್ತ ಹಾನಿಯಾಗಿದೆ. ಭಾರಿ ಗಾಳಿ, ಸಿಡಿಲಿನ ಜೊತೆ ಆರ್ಭಟಿಸಿದ ಮಳೆರಾಯನ ಅವಾಂತರಕ್ಕೆ ಜಿಲ್ಲೆಯು ನಡುಗಿ ಹೋಗಿದೆ.
ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡದೆ. ಹಲವು ಕಡೆಗಳಲ್ಲಿ ಭತ್ತ, ಜೋಳ, ಕಟಾವು ಮಾಡಿ ಇಟ್ಟಿದ್ದ ಮೆಣಸಿನಕಾಯಿ ಹಾನಿಯಾಗಿದ್ದು ರೈತರು ಹೈರಾಣ್ ಆಗುವಂತೆ ಮಾಡಿದೆ.
ಇದನ್ನೂ ಓದಿ : ಬೆಳಗಾವಿ ಪಾಲಿಕೆ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್, ಉಪಮೇಯರ್ ಹನುಮಂತ ಕೊಂಗಾಲಿ ಆಯ್ಕೆ



















