ರೈಲುಗಳಿಗೆ ಸಮಯ, ಮಾರ್ಗ, ಸುರಕ್ಷತಾ ವ್ಯವಸ್ಥೆ, ಸೈನ್ಯಕ್ಕೆ ದಿಕ್ಸೂಚಿಯಾಗಿರುವ ನಾವಿಕ್ ಆಕಾಶದಲ್ಲಿ ನಿಷ್ಕ್ರಿಯಗೊಂಡಿದೆ. ಇದು ದೇಶದ ಭದ್ರತೆಗೆ ಹೆಚ್ಚಿನ ಆತಂಕ ಸೃಷ್ಟಿಸಿದೆ. ನಾವಿಕ್ ಮೇಡನ್ ಇನ್ ಇಂಡಿಯಾ. ಪಾಪಿಗಳ ವಿರುದ್ಧ ಕಾರ್ಗಿಲ್ ಯುದ್ಧ ಗೆದ್ದಾಗ ವಿಜ್ಞಾನದ ಹಸಿವು ಭಾರತಕ್ಕೆ ಅವಶ್ಯ ಹಾಗೂ ಅನಿವಾರ್ಯವಾದಾಗ ನಾವಿಕ್ ಜನ್ಮತಾಳಿ ದಿಕ್ಸೂಚಿಯಾಗಿ ಭದ್ರತೆಗೆ ಶಕ್ತಿಯಾಗಿ ನಿಂತಿದೆ. ಆದರೆ, ಆಕಾಶದಿಂದ ಈಗ ಭಾರತಕ್ಕೊಂದು ಎಚ್ಚರಿಕೆ ಗಂಟೆ ಬರುತ್ತಿದೆ. ಭಾರತ ಬೇಗ ಎಚ್ಚೆತ್ತುಕೊಳ್ಳಬೇಕಿದೆ.
1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಭಾರತವು ಅಮೇರಿಕಾದ ಜಿಪಿಎಸ್ ವ್ಯವಸ್ಥೆಯ ಸಹಕಾರ ಕೋರಿತ್ತು. ಆದರೆ, ಅಮೆರಿಕ ಅಂದು ಭಾರತಕ್ಕೆ ನಂಬಿಕೆ ದ್ರೋಹ ಮಾಡಿತು. ಭಾರತವನ್ನು ತುಚ್ಛವಾಗಿ ಕಂಡಿತ್ತು. ಆಗ ನಿಖರವಾದ ಜಿಪಿಎಸ್ ಡೇಟಾವನ್ನು ಒದಗಿಸಲು ನಿರಾಕರಿಸಿತು. ಇದರಿಂದಾಗಿ ಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ಪಾಕಿಸ್ತಾನದ ಸ್ಥಾನಗಳನ್ನು ಪತ್ತೆಹಚ್ಚಲು ಮತ್ತು ನಿಖರವಾದ ದಾಳಿ ನಡೆಸಲು ಭಾರತೀಯ ಸೇನೆಗೆ ತುಂಬಾ ಕಷ್ಟವಾಯಿತು. ಸಹಜವಾಗಿ ಯುದ್ಧ ಭೀಕರತೆಯ ಹಾದಿ ಹಿಡಿಯಿತು.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುಎಸ್ ತನ್ನ ಸೈನ್ಯದ ಬಲವರ್ಧನೆಗಾಗಿ ಬಳಸುವ ‘ಸೆಲೆಕ್ಟಿವ್ ಅವೈಲಬಿಲಿಟಿ’ (SA) ತಂತ್ರಜ್ಞಾನವನ್ನು ಬಳಸಿ, ಭಾರತಕ್ಕೆ ನಿಖರವಾದ ಉಪಗ್ರಹ ಮಾಹಿತಿಯನ್ನು ನಿರಾಕರಿಸಿತು. ಈ ನಿರ್ಣಾಯಕ ಸಮಯದಲ್ಲಿ ಸ್ವಂತ ನ್ಯಾವಿಗೇಷನ್ ಸಿಸ್ಟಮ್ ಭಾರತದ ಕೈಯಲ್ಲಿ ಇರಲಿಲ್ಲ. ಇದು ಸೇನೆಯ ಕಾರ್ಯಾಚರಣೆಗೆ ತೀವ್ರ ಅಡಚಣೆ ಸೃಷ್ಟಿಸಿತ್ತು. ಕೊನೆಗೆ ಇಸ್ರೇಲ್ ನ ಆಯುಧಗಳ ಸಹಾಯದಿಂದ ಹಾಗೂ ಭಾರತದ ಕೆಚ್ಚೆಯಿಂದ ಪಾಕ್ ನ್ನು ಬಗ್ಗು ಬಡಿಯಲಾಯಿತು.
ಯುದ್ಧ ಗೆದ್ದ ನಂತರ ಭಾರತಕ್ಕೆ ಇದೊಂದು ದೊಡ್ಡ ಪಾಠವೂ ಆಯಿತು. ಮೈಕೊಡವಿಕೊಂಡು ಎದ್ದ ಭಾರತ ವಿಜ್ಞಾನ ಕ್ರಾಂತಿಗೆ ಮುಂದಾಯಿತು. ತನ್ನದೇ ಆದ ‘ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್’ (IRNSS) ಅಥವಾ NavIC (Navigation with Indian Constellation) ನ್ನು ಅಭಿವೃದ್ಧಿಪಡಿಸುವ ನಿರ್ಧಾರಕ್ಕೆ ಪ್ರೇರಣೆಯಾಗಿ ನಿರ್ಮಿಸಿತು. ಘಟನೆ ನಂತರ ಭಾರತವು ತನ್ನದೇ ಆದ ಸ್ವತಂತ್ರ ನ್ಯಾವಿಗೇಷನ್ ಸಿಸ್ಟಮ್ ಅಭಿವೃದ್ಧಿ ಪಡಿಸಿತು.
ಇದು ಕೇವಲ ಸೇನೆಗಷ್ಟೇ ಅಲ್ಲ, ರೈಲ್ವೆ, ಸರ್ಕಾರಿ ಸಂಸ್ಥೆ, ಪ್ರಯಾಣದ ದಿಕ್ಸೂಚಿ (ಜಿಪಿಎಸ್ ರೀತಿ)ಯಾಯಿತು. ಆದರೆ, ಈಗ ಆಕಾಶದಲ್ಲಿರುವ ‘ನಾವಿಕ್’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷ ಕಂಡು ಬಂದಿದ್ದು, ಕಾರ್ಯನಿರ್ವಹಣೆಯಲ್ಲಿದ್ದ 4 ಉಪಗ್ರಹಗಳಲ್ಲಿ ಒಂದು ಉಪಗ್ರಹ ಸಂಪೂರ್ಣ ಹಾಳಾಗಿದೆ ಎನ್ನಲಾಗಿದೆ. ಭಾರತ ಇದನ್ನು ನಿರ್ಲಕ್ಷಿಸಿದರೆ ದೊಡ್ಡ ಗಂಡಾಂತರ ಎದುರಾಗಬಹುದು. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ. ಭಾರತದ ಭದ್ರತೆಗೆ ಧಕ್ಕೆಯಾದರೆ ಮತ್ತೆ ಪರದೇಶಿಗಳತ್ತ ದಿಕ್ಸೂಚಿಗಾಗಿ ಕೈ ಚಾಚುವ ಸಂದರ್ಭ ಒದಗಿ ಬರಬಹುದು. ಶತ್ರುಗಳು ಮತ್ತಿನ್ನೆನೋ ಕುತಂತ್ರ ಮಾಡಬಹುದು. ಹೀಗಾಗಿ ಭಾರತ ಎಚ್ಚೆತ್ತುಕೊಳ್ಳಬೇಕಿದೆ.
ಈ ದಿಕ್ಸೂಚಿಯ 4 ಉಪಗ್ರಹಗಳು ಕಾರ್ಯನಿರ್ವಹಣೆಯಲ್ಲಿರಬೇಕು. 10 ವರ್ಷಗಳ ಹಿಂದೆ, 2016ರ ಮಾ.10ರಂದು ಇದನ್ನು ಉಡಾವಣೆ ಮಾಡಲಾಗಿದೆ. ಇದೀಗ ಈ ವ್ಯವಸ್ಥೆ ಹಾನಿಗೊಂಡಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇನ್ನು ಇದು ಭಾರತೀಯ ಸೇನೆಗೆ ಕ್ಷಿಪಣಿ, ಡ್ರೋನ್, ಸೈನಿಕ ಕಾರ್ಯಾಚರಣೆ ಮೊದಲಾದವುಗಳಿಗೆ ಜಿಪಿಎಸ್ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ನಾವಿಕ್ ಕೈಕೊಟ್ಟರೆ ರಾಷ್ಟ್ರೀಯ ಭದ್ರತೆಗೂ ಅಪಾಯ ಇರುತ್ತದೆ. ಹೀಗಾಗಿ ಭಾರತವು ಚುನಾವಣೆಯ ಮೂಡ್ ನಲ್ಲಿದ್ದರೂ ಈ ಸಮಸ್ಯೆ ಬಗೆಹರಿಸುವುದು ಸದ್ಯದ ದಿನದಲ್ಲಿ ತುಂಬಾ ಅವಶ್ಯವಾಗಿದೆ.
ಇದನ್ನೂ ಓದಿ ; ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ ಭೀಕರ ನೋ-ಬಾಲ್.. ಅಸದ್ ಅಖ್ತರ್ ಎಸೆತಕ್ಕೆ ಮರುಕಳಿಸಿತು ಕರಾಳ ನೆನಪು!


















