ಬೆಂಗಳೂರು | ಆಸ್ತಿ ವಿವಾದ ಹಿನ್ನೆಲೆ ಫ್ಯಾಮಿಲಿಯೊಂದು ಮನೆ ಮುಂದೆ ಬಂದು ರೌಡಿಸಂ ಮಾಡಿರುವ ಘಟನೆ ರಾಜಾಜಿನಗರ ಬಳಿಯ ಪ್ರಕಾಶನಗರದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಇಡೀ ಕುಟುಂಬಕ್ಕೆ ಕುಟುಂಬವೇ ಬಂದು ರೌಡಿಸಂ ಮಾಡಿದ್ದು, ಮುರುಗನ್, ವರುಣ್, ಸೌಮ್ಯ, ಅರುಣ್ ದಾಂಧಲೆ ನಡೆಸಿದವರೆಂದು ಗುರಿತಿಸಲಾಗಿದೆ.
ಪೊಲೀಸರ ಭಯವೇ ಇಲ್ಲದೇ ರೌಡಿಸಂ ಮಾಡಿರುವ ನಾಲ್ಕು ಮಂದಿ, ಗೇಟ್ ಮುಚ್ಚಿದ್ದರು ಸಹ ಗೇಟ್ಗೆ ಒದ್ದು ಹುಚ್ಚಾಟ ಮೆರೆದಿದ್ದಾರೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆ ಬಳಿ ಗಲಾಟೆ ಮಾಡಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಯುದ್ಧದ ಕಾರ್ಮೋಡ – ವಿಮಾನ ಟಿಕೆಟ್ ದರವೂ ಏರಿಕೆ, ಪ್ರಯಾಣಿಕರು ಕಂಗಾಲು!



















