ಬೆಂಗಳೂರು | ನಗರದ ಹೃದಯ ಭಾಗ ಮಲ್ಲೇಶ್ವರಂನಲ್ಲಿರುವ ಗೌಡ ಸಾರಸ್ವತ ಸೇವಕ ಸಮಾಜದ (ರಿ), ವತಿಯಿಂದ GSB Startup Angels ಎಂಬ ಹೊಸ ಯೋಜನೆಯ ಶುಭಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು GSB (ಗೌಡ ಸಾರಸ್ವತ ಬ್ರಾಹ್ಮಣ) ಸಮುದಾಯದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆರಂಭವಾಗುತ್ತಿರುವ ಮಹತ್ವದ ಯೋಜನೆಯಾಗಿದೆ. ಯುವಕರು ತಮ್ಮ ಹೊಸ ಆಲೋಚನೆಗಳನ್ನು ಯಶಸ್ವಿ ಸ್ಟಾರ್ಟ್ಅಪ್ಗಳಾಗಿ ರೂಪಿಸಿಕೊಳ್ಳಲು ಮಾರ್ಗದರ್ಶನ, ಬೆಂಬಲ ಮತ್ತು ಅವಕಾಶಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.
ಇಂದು (ಮಾ.15) ಸಂಜೆ 5:00 ಗಂಟೆಗೆ ಮಲ್ಲೇಶ್ವರಂನ ಶ್ರೀ ಕಾಶಿ ಮಠದಲ್ಲಿ ಈ ಭವ್ಯ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಮಾಜದ ಪ್ರಮುಖರು ಭಾಗವಹಿಸಲಿದ್ದು, ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುವಂತೆ ವಿವಿಧ ಭಾಷಣಗಳು ಹಾಗೂ ಕಾರ್ಯಕ್ರಮಗಳು ನಡೆಯಲಿವೆ.
ಉದ್ಯಮಿ, ಶಿಕ್ಷಣತಜ್ಞ ಹಾಗೂ ಸಮಾಜಸೇವಕರೂ ಆಗಿರುವ ಡಾ. ಪಿ. ದಯಾನಂದ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ತಮ್ಮ ಅನುಭವ ಮತ್ತು ಮಾರ್ಗದರ್ಶನದ ಮೂಲಕ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಿದ್ದಾರೆ. ಜೊತೆಗೆ UK & Co ನ ಸ್ಥಾಪಕ ಕೆ. ಉಲ್ಲಾಸ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮವು ಸಂಜೆ 4:30ಕ್ಕೆ High Tea ನೊಂದಿಗೆ ಆರಂಭವಾಗುತ್ತದೆ. ನಂತರ 5:00ಕ್ಕೆ Invocation, 5:05ಕ್ಕೆ ದೀಪ ಪ್ರಜ್ವಲನೆ, 5:10ಕ್ಕೆ ಆರ್.ಎಸ್. ಶಾಂಭಾಗ್ ಅವರಿಂದ ಸ್ವಾಗತ ಭಾಷಣ ನಡೆಯಲಿದೆ. 5:20ಕ್ಕೆ ಕೆ. ಉಲ್ಲಾಸ್ ಕಾಮತ್ ಅವರ ಮುಖ್ಯ ಭಾಷಣ, 5:40ಕ್ಕೆ GSB Startup Angels ಯೋಜನೆಯ ಅಧಿಕೃತ ಪ್ರಾರಂಭ ನಡೆಯಲಿದೆ.
ಇದರ ನಂತರ 5:50ಕ್ಕೆ Subscribers ಗೌರವ ಸಮಾರಂಭ ನಡೆಯಲಿದೆ. 6:00ಕ್ಕೆ ಅಧ್ಯಕ್ಷೀಯ ಭಾಷಣವನ್ನು ಡಾ. ಪಿ. ದಯಾನಂದ ಪೈ ನೀಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ 6:30ಕ್ಕೆ ಜಿ.ಜಿ. ಶೆಣೈ ಅವರಿಂದ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಸಮಾಪನವಾಗುತ್ತದೆ.
GSB Startup Angels ಯೋಜನೆ GSB ಸಮುದಾಯದ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಹೊಸ ಸ್ಟಾರ್ಟ್ಅಪ್ಗಳನ್ನು ನಿರ್ಮಿಸಲು ಮತ್ತು ಜಾಗತಿಕ ಮಟ್ಟದ ಉದ್ಯಮಗಳನ್ನು ಬೆಳೆಸಲು ಸಹಾಯ ಮಾಡುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಯುವಕರು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅವಕಾಶ ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ https://gsbconnect.org ವೆಬ್ಸೈಟ್ಗೆ ಭೇಟಿ ನೀಡಬಹುದು.
ಇದನ್ನೂ ಓದಿ : ಎಲ್ಪಿಜಿ ಸಿಲಿಂಡರ್ ಎಮರ್ಜೆನ್ಸಿ : ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ



















