ಬೆಂಗಳೂರು | ಇಂದು ಬೆಳ್ಳಂಬೆಳಗ್ಗೆ ರೈಲ್ವೆ ಅಂಡರ್ ಪಾಸ್ ಕೆಳಗಿನ ಶೀಟ್ ಕಳಚಿಬಿದ್ದ ಘಟನೆ ಶೇಷಾದ್ರಿಪುರಂ to ಆನಂದ್ರಾವ್ ಸರ್ಕಲ್ ಕಡೆಗೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಮಾಹಿತಿಗಳ ಪ್ರಕಾರ ಬಸ್ಗೆ ತಾಗಿ ರೈಲ್ವೆ ಅಂಡರ್ ಪಾಸ್ ತಗಡಿನ ಶೀಟ್ ನಡು ರಸ್ತೆಗೆ ಕಳಚಿ ಬಿದ್ದಿದೆ. ತುಕ್ಕು ಹಿಡಿದಿದ್ದ ಪರಿಣಾಮ ಮೊದಲೇ ಕಬ್ಬಿಣದ ಕ್ಲಿಪ್ ಕಟ್ ಕೂಡ ಕಟ್ ಆಗಿತ್ತು ಎನ್ನಲಾಗಿದೆ.
ಯಾವುದೇ ಕ್ಷಣದಲ್ಲಿ ಉಳಿದ ಶೀಟ್ ಬೀಳುವ ಸಾಧ್ಯತೆಯಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈಲ್ವೆ ಸಿಬ್ಬಂದಿ ಹಾಗೂ ಶೇಷಾದ್ರಿಪುರಂ ಟ್ರಾಫಿಕ್ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪಾಯದ ಹಂತದಲ್ಲಿರುವ ಶೀಟ್ನ ತೆರವು ಕಾರ್ಯಚರಣೆ ಮಾಡಲಾಗುತ್ತಿದೆ. ಗ್ಯಾಸ್ ಕಟರ್ನಿಂದ ಕಂಬಿ ಕಟ್ ಮಾಡಿದ ಸಿಬ್ಬಂದಿ, ರಸ್ತೆಗೆ ಬಿದ್ದ ಶೀಟ್ ಹಾಗೂ ಉಳಿದ ಎಲ್ಲಾ ಶೀಟ್ಗಳನ್ನು ತೆರವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಸಾಫ್ಟ್ವೇರ್ ಉದ್ಯೋಗಿಯ ಮನೆಗೆ ಕನ್ನ.. 1.8 ಕೆಜಿ ವಜ್ರಾಭರಣ ದೋಚಿದವ ಅರೆಸ್ಟ್!



















