ಹುಬ್ಬಳ್ಳಿ : ಕುಟುಂಬವೊಂದು ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿರುವ ಘಟನೆ ಕಲಗಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ.
ಮಹದೇವಿ ನಾಯ್ಕರ್ ಅವರ ಸಾಕು ನಾಯಿಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ. ಗರ್ಭಿಣಿಯಾಗಿದ್ದ ಡಾಬರಮನ್ ತಳಿಯ ಶ್ವಾನಕ್ಕೆ ಮುತ್ತೈದೆಯರನ್ನು ಕರಿಸಿ, ಉಡಿ ತುಂಬಿಸಿ ಧಾರ್ಮಿಕ ವಿಧಿವಿದಾನಗಳ ಮೂಲಕ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.
ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ವಾನದ ಗರ್ಭಾವಸ್ಥೆಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಕಾಡಾನೆ ದಾಳಿಗೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಬಲಿ



















