ಚಾಮರಾಜನಗರ : ಮಹದೇಶ್ವರ ಬೆಟ್ಟದ ವಜ್ರಮಲೆ ವಸತಿ ಗೃಹದ ಪೀಠೋಪಕರಣಕ್ಕೆ ಕಳಪೆ ಗುಣಮಟ್ಟದ ಮರ ಬಳಕೆ ಹಿನ್ನೆಲೆ ಪೀಠೋಪಕರಣ ತಯಾರಿ ಕಾಮಗಾರಿ ಸ್ಥಗಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ ನೀಡಿದ್ದಾರೆ.
386 ಕೊಠಡಿಗಳನ್ನುಳ್ಳ ವಜ್ರಮಲೆ ವಸತಿಗೃಹದ ಪ್ರತಿಕೊಠಡಿಗೂ ಮಂಚ, ಟೇಬಲ್, ಕುರ್ಚಿ ಸೋಫಾ ಮತ್ತಿತರ ಪೀಠೋಪಕರಣಗಳು ಗುಣಮಟ್ಟದ್ದಾಗಿರಬೇಕು. ಕಳಪೆ ಕಾಮಗಾರಿಗೆ ಅವಕಾಶವೇ ಇಲ್ಲ. ಪೀಠೋಪಕರಣಗಳಿಗೆ ಬಿಳಿಮರ ಉಪಯೋಗಿಸಬಾರದು ಗುಣಮಟ್ಟದ ಮರ ಬಳಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಕೆ ವೆಂಕಟೇಶ್, ಬೆಟ್ಟದಲ್ಲಿ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್ , ಹೊಸ ದಾಸೋಹ ಭವನ ಸೇರಿದಂತೆ ಹಲವು ಕಾಮಗಾರಿ ಪ್ರಗತಿಯಲ್ಲಿವೆ. ಕಾಮಗಾರಿ ಚುರುಕುಗೊಳಿಸಲು ಸೂಚನೆ ನೀಡಿದ್ದೇನೆ ವಜ್ರಮಲೆ ಕಾಮಗಾರಿ ಬಹುತೇಕ ಮುಗಿದಿದೆ. ಕ್ಯೂ ಕಾಂಪ್ಲೆಕ್ಸ್ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಯಲಿದೆ. ಸಿಎಂ ಮೂಲಕ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 8 ಲಕ್ಷ ಸಾಲ ಮಾಡಿ ಏರ್ ಆಂಬ್ಯುಲೆನ್ಸ್ ಏರಿದ್ದ ದಂಪತಿ ದುರ್ಮರಣ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ



















