ಚಿಕ್ಕಬಳ್ಳಾಪುರ : ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ಅದೇ ತರ ಬಿಜೆಪಿ ತನ್ನ ಕೊನೆಗಾಲದಲ್ಲಿ ಈ ರೀತಿ ಮಾಡುತ್ತಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಮನ್ರೇಗಾ ಬಚಾವೋ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮನ್ರೇಗಾ ಯೋಜನೆ ಉಳಿಸಿ ಉದ್ಯೋಗಗಳನ್ನ ಸೃಷ್ಟಿ ಮಾಡಬೇಕು. ಯೋಜನೆಯನ್ನ 60-40 ಸೂತ್ರದಡಿ ಹೊಸದಾಗಿ ಕಾಯ್ದೆಯನ್ನ ತಂದಿದ್ದಾರೆ. ಇದನ್ನ ಬಿಜೆಪಿಯೇತರ ರಾಜ್ಯಗಳು ಯಾರು ಕೂಡ ಒಪ್ಪಿಕೊಳ್ಳುತ್ತಿಲ್ಲ. ಪಕ್ಕದ ರಾಜ್ಯದ ಚಂದ್ರಬಾಬು ನಾಯ್ಡು ಕೂಡ ಇದರ ವಿರುದ್ದ ಮಾತನಾಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಯಾರು ಕೂಡ ಆತಂಕಕ್ಕೆ ಒಳಗಾಗೋದು ಬೇಡವೇ ಬೇಡ. ನಾವು ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿ ಯೋಜನೆಗಳನ್ನ ತಂದಿದ್ದೇವೆ. ಇದರ ಬಗ್ಗೆ, ಬಿಜೆಪಿ ಅವರು ,ಪ್ರಧಾನಿ ಅವರೇ ಟೀಕೆ ಮಾಡ್ತಿದ್ರು. ಈಗ ಅದೇ ದೇಶದ ಪ್ರಮುಖ ಯೋಜನೆ ಆಗಿ ರೂಪುಗೊಳ್ಳುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ್ ಲಾಡ್-MLC ಜಕ್ಕಪ್ಪನವರ ಮಧ್ಯೆ ಮಾತಿನ ಚಕಮಕಿ



















