ದಾವಣಗೆರೆ: ರಾಜ್ಯದಲ್ಲಿ ಮ್ಯೂಲ್ ಅಕೌಂಟ್ಗಳ ವಿರುದ್ಧ ಸೈಬರ್ ಪೊಲೀಸರ ಸಮರ ಸಾರಿದ್ದು, ಬ್ಯಾಂಕ್ ಖಾತೆಗಳನ್ನು ನೀಡಿ ಸೈಬರ್ ವಂಚನೆಗೆ ಸಹಕರಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಖತರ್ನಾಕ್ ಸೈಬರ್ ವಂಚಕರನ್ನು ದಾವಣಗೆರೆ ಸಿಇಎನ್(CEN)ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿ ತಾಲೂಕಿನ ಕುಂಕುವ ಗ್ರಾಮದ ಪರಶುರಾಮ ಬಂಧಿತ ಆರೋಪಿ. ಬೆಂಗಳೂರಿನ ರಾಜಾಜಿನಗರದಲ್ಲಿ ಟ್ಯಾಲೆಂಟೆಡ್ ಸ್ಕ್ವಾಡ್ ಸೊಲ್ಯೂಷನ್ ಜಾಬ್ ಪ್ಲೇಸ್ ಮೆಂಟ್ ಹೆಸರಲ್ಲಿ ಕಂಪನಿ ತಗೆದಿದ್ದ ಪರಶುರಾಮ, ವಿವಿಧ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳಲ್ಲಿ 6 ಖಾತೆ ತಗೆದಿದ್ದ ಎನ್ನಲಾಗುತ್ತಿದೆ.
ಈ 6 ಮ್ಯೂಲ್ ಅಕೌಂಟ್ಗಳಿಂದ ಕೋಟ್ಯಂತರ ಹಣ ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, 6 ಮ್ಯೂಲ್ ಅಕೌಂಟ್ಗಳ ವಿರುದ್ಧ ದೇಶಾದ್ಯಂತ 95 ಪ್ರಕರಣ ದಾಖಲಾಗಿದ್ದು ಪತ್ತೆಯಾಗಿದೆ. ಸದ್ಯ ಪೊಲೀಸರು ಆರೋಪಿ ಪರಶುರಾಮನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಅರೆಸ್ಟ್
ಇನ್ನೂ ಮತ್ತೊಂದು ಪ್ರಕರಣದಲ್ಲಿ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕೆಲಸದಾಸೆಗೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿ ಇದೀಗಾ ಜೈಲು ಪಾಲಾಗಿದ್ದಾನೆ.
ಎರಡು ಬ್ಯಾಂಕ್ ಖಾತೆ ತೆರೆದು ವಂಚನೆ ಮಾಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯ ಮ್ಯೂಲ್ ಅಕೌಂಟ್ಗಳ ಪರಿಶೀಲನೆ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಟೆಲಿಗ್ರಾಂನಲ್ಲಿ ಭೂಮಿಕ ಎಂಬ ಐಡಿಯಿಂದ ವಿದ್ಯಾರ್ಥಿಗೆ ಸೈಬರ್ ವಂಚಕರ ಪರಿಚಯವಾಗಿದೆ. ‘ಅರ್ನ್ ವೈಲ್ ಲರ್ನ್’ ಕಲಿಯುವಾಗಲೇ ಸಂಪಾದಿಸಿ ಎಂದು ಹೇಳಿದ್ದ ವಂಚಕರು, ನಿನ್ನ ಖಾತೆಗೆ ಬಂದ ಹಣ ನಾವು ನೀಡುವ UPI ಐಡಿಗಳಿಗೆ ವರ್ಗಾಯಿಸಲು ಟಾಸ್ಕ್ ನೀಡಿದ್ದರು. ಅದೇ ರೀತಿ ತನ್ನ ಖಾತೆಗೆ ಬಂದ ಹಣ ಬೇರೆಯವರ ಖಾತೆಗೆ ವರ್ಗಾಯಿಸಿದ್ದಾನೆ. ಈ ಕೆಲಸಕ್ಕೆ ವಿದ್ಯಾರ್ಥಿಗೆ ಒಂದಷ್ಟು ಕಮಿಷನ್ ನೀಡ್ತಿದ್ದರು. ಬಳಿಕ ಹಣದಾಸೆಗೆ ಎರಡು ಬ್ಯಾಂಕ್ ಖಾತೆ ತೆರೆದಿದ್ದಾರೆ. ಈ ಖಾತೆಗಳ ಉಲ್ಲೇಖಿಸಿ ದೇಶದ ವಿವಿಧೆಡೆ ಎಂಟು ಪ್ರಕರಣ ದಾಖಲಾಗಿದ್ದು ಪತ್ತೆಯಾಗಿದೆ. ಸದ್ಯ ಪೊಲೀಸರು ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಂಚಕರ ಜಾಲಕ್ಕೆ ಬೀಳದಂತೆ ದಾವಣಗೆರೆ ಎಸ್ಪಿ ಶೇಖರ್ ಹೆಚ್.ಟಿ. ನೀಡಿದ್ದಾರೆ.
ಇದನ್ನೂ ಓದಿ: ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್ | ಇನ್ಮುಂದೆ ಈ ಸೇವೆಗಾಗಿ ನೀವು RTO ಕಚೇರಿಗೆ ಅಲೆಯಬೇಕಿಲ್ಲ



















