ಚಿಕ್ಕಬಳ್ಲಾಪುರ: ಅಡುಗೆ ಸಿಬ್ಬಂದಿ ಪತಿಯಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಅಡುಗೆ ಸಿಬ್ಬಂದಿ ಪತಿ ಖಲಂಧರ್ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ವಸತಿ ಶಾಲೆಯು ಅವ್ಯವಸ್ಥೆಯ ಅಗರವಾಗುತ್ತಿದೆ ಎಂದು ವೀಡಿಯೋ ಇಟ್ಟುಕೊಂಡು ನಕಲಿ ಪತ್ರಕರ್ತರಿಂದ ದಮ್ಕಿ ಹಾಕಿಸಲಾಗಿದೆ.
20 ಬಾಲಕರು, 20 ಬಾಲಕಿಯರು ಇರುವ ಈ ವಸತಿ ಶಾಲೆಗೆ ನಕಲಿ ಪತ್ರಕರ್ತರು ಬಂದ ಮಾಹಿತಿ ತಿಳಿದ ಬಳಿಕ ತಾಹಶೀಲ್ದಾರ್ ಭೇಟಿ ನೀಡಿದ್ದು, ಸಿಸಿಟಿವಿ, ಬಯೋಮೆಟ್ರಿಕ್, ಊಟದ ಮೆನು ಇಲ್ಲದ ಹಾಸ್ಟೆಲ್ ನಿರ್ವಹಣೆಯನ್ನು ನೋಡಿ ಶಾಕ್ ಆದ ಗೌರಿಬಿದನೂರು ತಾಹಶೀಲ್ದಾರ್ ಅರವಿಂದ್, ವಸತಿ ಶಾಲೆ ವಾರ್ಡನ್ ನವೀನ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೆದುಕೊಂಡು, ನಕಲಿ ಪತ್ರಕರ್ತರ ವಿರುದ್ದ ದೂರು ನೀಡುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿದ ಕುಡುಕರು



















