ಚಿತ್ರದುರ್ಗ : ಎಣ್ಣೆ ಏಟಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿ, ಮೊಬೈಲ್ ಅಂಗಡಿ ಮಾಲೀಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೈದಿರುವ ಘಟನೆ ಹಿರಿಯೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ನಡೆದಿದೆ.
ವಿನಯ್ ಮೊಬೈಲ್ ಅಂಗಡಿ ಮಾಲೀಕ. ದಿಲೀಪ್, ಸ್ಟಿಫನ್, ದಾದ ಹಾಗೂ ಇತರರಿಂದ ಅಂಗಡಿ ದಾಂಧಲೆ. ಅಂಗಡಿಯಲ್ಲಿನ ಪೀಠೋಪಕರಣ, ಕಂಪ್ಲೂಟರ್ ಸೇರಿ, ಗ್ರಾಹಕರ ಮೊಬೈಲ್ ಒಡೆದು ಚೂರು ಚೂರು ಮಾಡಿದ್ದಾರೆ. ಕುಡಿದು ಬಂದಿದ್ದ ಪುಂಡರು ಮೊಬೈಲ್ ರಿಪೇರಿಯ ನೆಪ ಮಾಡಿಕೊಂಡು ಬಂದು ನಿನಗೆ ಒಂದು ಮೊಬೈಲ್ ರಿಪೇರಿ ಮಾಡೋಕೆ ಆಗಲ್ಲ ನಿನಗ್ಯಾಕೆ ಅಂಗಡಿ ಎಂದು ಆತನ ಮೇಲೆ ಹಲ್ಲೆ ಮಾಡಿ, ಅಂಗಡಿ ಧ್ವಂಸ ಮಾಡಿದ್ದಾರೆ.
ಘಟನಾ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ವ್ಯಾಪಾರಸ್ಥರೇ ಎಚ್ಚರ..! ಹೋಲ್ಸೇಲ್ ಕಿರಾಣಿ ಶಾಪ್ ಎದುರಿಟ್ಟಿದ್ದ ಉಪ್ಪಿನ ಚೀಲ ಕದ್ದ ಖದೀಮರು



















