ಇಸ್ರೇಲ್ – ಇರಾನ್ ಸಂಘರ್ಷ ಇನ್ನೂ ಮುಗಿದಿಲ್ಲ. ಈ ನಡುವೆ ಭಾರತ – ಪಾಕ್ ಮಧ್ಯೆ ಯುದ್ಧದ ವಾತಾವರಣವೂ ನಿರ್ಮಾಣವಾಗಿತ್ತು. ಇದೀಗ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ತೀವ್ರ ಸೇನಾ ಸಂಘರ್ಷ ನಡಿತಾ ಇದೆ. ಕಾಂಬೊ- ಥೈ ಗಡಿ ಪ್ರದೇಶಗಳಲ್ಲಿ ವಾಯು ದಾಳಿ ನಡೆಸಿದೆ. ಈ ಸಂಘರ್ಷಕ್ಕೆ ಕಾರಣ ಆ ಒಂದು ಶಿವ ದೇವಸ್ಥಾನ.
ಕಾಂಬೋಡಿಯಾ ಥೈಲ್ಯಾಂಡ್ನ ಸಂಘರ್ಷ ನಡೆಯಲು ಮೂಲ ಕಾರಣ ಗಡಿಯಲ್ಲಿರುವ ಹಿಂದೂ ದೇಗುಲ. ಈ ದೇವಾಲಯದ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ದಶಕಗಳಿಂದ ಕಚ್ಚಾಟ ನಡೆಯುತ್ತಿದೆ. ಇದು ಈಗ ಯುದ್ಧವಾಗಿ ಬದಲಾಗಿದೆ… ಆ ದೇವಸ್ಥಾನವೇ ಪ್ರಿಯಾ ವಿಹಾರ ಹಿಂದೂ ದೇವಾಲಯ..
12 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಪ್ರಿಯಾ ವಿಹಾರ್ ದೇವಾಲಯ.. ಕಾಂಬೋಡಿಯಾದ ಡಾಂಗ್ರೆಕ್ ಬಂಡೆಯ ಮೇಲೆ ಸ್ಥಾಪಿತಗೊಂಡಿದೆ. ಖಮೇರ್ ವಂಶ ಉದಯಾದಿತ್ಯ ವರ್ಮನ್ – 2 ಕಾಂಬೋಡಿಯಾವನ್ನು ಆಳುತ್ತಿದ್ದ ವೇಳೆ ಈಗಿನ ಕಾಂಬೋಡಿಯಾ ಥಾಯ್ಲೆಂಡ್ ಗಡಿಯಲ್ಲಿ ಡಾಂಗ್ರೆಕ್ ಬೆಟ್ಟದಲ್ಲಿ ಪ್ರಸಾತ್ ತಾ ಮುಯಮ್ ಥಾಮ್ ಎಂಬ ಶಿವ ದೇವಾಲಯವನ್ನು ಕಟ್ಟಿಸಿದ್ದ. ಕಾಲಾನಂತರ ಈ ಸ್ಥಳ ಬೌದ್ಧರ ಆಳ್ವಿಕೆಗೆ ಒಳಪಟ್ಟಿತ್ತು. 900 ವರ್ಷಗಳಷ್ಟು ಹಳೆಯ ಈ ದೇಗುಲ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿದೆ. ಸದ್ಯ ಈ ದೇವಸ್ಥಾನ ನಮಗೆ ಸೇರಬೇಕೆಂಬುದು ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣ..
ಥೈಲ್ಯಾಂಡ್–ಕಾಂಬೋಡಿಯಾ ಗಡಿಯ ನಡುವಿನ ಪ್ರಾಚೀನ ಹಿಂದೂ ದೇವಸ್ಥಾನ ತಮ್ಮದಾಗಿಸಿಕೊಳ್ಳಲು ಸಮರ ಸಾರುತ್ತಿವೆ. ಸಂಘರ್ಷದ ವೇಳೆ ಥೈ ಪಡೆ ಆಂಜನೇಯನ ವಿಗ್ರಹವನ್ನು ನೆಲಕ್ಕುರುಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರ ಭಾವನೆಯನ್ನ ಕೆರಳಿಸಿದೆ. ಇದು ಧರ್ಮದ ಯುದ್ಧವೇ? ಅಥವಾ ಧರ್ಮವನ್ನು ಬಳಸಿಕೊಂಡ ಭೂಮಿಗಾಗಿ ಯುದ್ಧವೇ? ಅಂತ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಆಂಜನೇಯನ ಮೂರ್ತಿ ಹಿಂದೂಗಳ ಭಕ್ತಿಯ ಸಂಕೇತ.. ಅದನ್ನೂ ಕೆಡವಿ ಥೈಲ್ಯಾಂಡ್ ಹಿಂದೂಗಳನ್ನು ಎದುರಾಕಿಕೊಂಡಿದೆ. ಭೂಮಿ ಮತ್ತು ಗಡಿ ಅಧಿಕಾರಕ್ಕಾಗಿ ದೇವಾಲಯವನ್ನು ನೆಪಮಾಡಿಕೊಂಡಿದ್ದಾರೆ.. ಇಲ್ಲಿ ಯುದ್ದ ಶಿವನಿಗಾಗಿಯೂ ಅಲ್ಲ, ಮಾರುತಿಗಾಗಿಯೂ ಅಲ್ಲ ಇದು ಕೇವಲ ಗಡಿಯಾಸೆಗಾಗಿ ಎಂದು ಜನರು ಥೈಲ್ಯಾಂಡ್ ವಿರುದ್ಧ ಕಿಡಿಕಾರುತ್ತಿದ್ದಾರೆ..
ಇತ್ತ ಭಾರತ ಹಿಂದೊಮ್ಮೆ ಯುದ್ಧ ಉಲ್ಬಣಗೊಂಡಾಗ ಶಾಂತಿಯಿಂದ ವರ್ತಿಸುವಂತೆ ಮತ್ತು ಯುದ್ಧದ ಉಲ್ಬಣವನ್ನು ತಡೆಯುವಂತೆ ಮನವಿ ಮಾಡಿತ್ತು.. ಪ್ರಿಯಾ ವಿಹಿಯರ್ ದೇವಾಲಯದ ಯುನೆಸ್ಕೋ ವಿಶ್ವ ಪರಂಪರೆಯ ತಾಣವು ಮಾನವೀಯತೆಯ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯಾಗಿದೆ. ಭಾರತವು ಅದರ ಸಂರಕ್ಷಣೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತನ್ನ ಹೇಳಿಕೆಯನ್ನ ಕೊಟ್ಟಿದ್ದರು.
ಇದನ್ನೂ ಓದಿ : ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೇಮಕಾತಿ :1.8 ಲಕ್ಷ ರೂ.ವರೆಗೆ ಸಂಬಳ



















