ಚಿಕ್ಕಬಳ್ಳಾಪುರ: ದಟ್ಟ ಮಂಜಿನಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. 23 ದಿನಗಳಲ್ಲೇ 75 ಅಪಘಾತ ಸಂಭವಿಸಿದ್ದು, 33 ಮಂದಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಾದ್ಯಂತ ಈ ಬಾರಿ ಅತಿಯಾದ ಮಂಜು ಕವಿಯುತ್ತಿದ್ದು, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಅಪಘಾತಗಳು ಆಗುತ್ತಿವೆ. ಶೂನ್ಯ ಗೋಚರತೆ ಪರಿಣಾಮದಿಂದ ಎದುರುಗಡೆ ಇರೋ ವಾಹನಗಳು ಸಹ ಕಣ್ಣಿಗೆ ಕಾಣದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಡಿಸೆಂಬರ್ ತಿಂಗಳಲ್ಲೇ 75 ಕಡೆ ಅಪಘಾತಗಳಾಗಿದ್ದು, 31 ಮಾರಣಾಂತಿಕವಾದ ಅಪಘಾತಗಳು ಸಂಭವಿಸಿದೆ.
ಚಳಿಗಾಲದ ನಡುವೆ ಶೀತಗಾಳಿಯ ಅಬ್ಬರ ಜೋರಾಗಿದೆ. ಈ ಬಾರಿಯ ತೀವ್ರ ತರ ಚಳಿಗೆ ಜನರು ಗಡ ಗಡ ನಡುಗುವಂತೆ ಆಗಿದೆ. ಅದ್ರಲ್ಲೂ ಮುಂಜಾನೆ ದಟ್ಟ ಮಂಜು ಕವಿಯುತ್ತಿರೋ ಕಾರಣ ಶೂನ್ಯ ಗೋಚರತೆ ಎದುರಾಗುತ್ತಿದೆ. ಚಳಿಯ ನಡುವೆ ದಟ್ಟ ಮಂಜು ಜನರನ್ನ ಮನೆಯಿಂದ ಹೊರಬರೋಕು ಆಗದಂತೆ ಮಾಡ್ತಿದೆ. ಇದರ ನಡುವೆ ಹೆದ್ದಾರಿಗಳಲ್ಲಿ ಸಂಚರಿಸೋ ವಾಹನ ಸವಾರರ ಪಾಡು ಹೇಳತೀರದ್ದಾಗಿದೆ.
ಇದನ್ನೂ ಓದಿ : ಮಗಳನ್ನ ಮದುವೆ ಮಾಡಿಕೊಡಲಿಲ್ಲ ಎಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ



















