ಬೆಂಗಳೂರು: ಕೇಂದ್ರ ಸರ್ಕಾರವು ದೇಶದ 10 ಕೋಟಿ ಬಡ ಕುಟುಂಬಗಳ 50 ಜನರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ಕವರ್ ನೀಡುವ ಆಯುಷ್ಮಾನ್ ಭಾರತ್ (Ayushman Bharat) ಯೋಜನೆ ಜಾರಿಗೊಳಿಸಿದೆ. ಇದರೊಂದಿಗೆ 50 ಕೋಟಿ ಜನರು ಆಸ್ಪತ್ರೆಗಳಲ್ಲಿ ಉಚಿತವಾಗಿ 5 ಲಕ್ಷ ರೂಪಾಯಿ ಮಿತಿಯೊಳಗೆ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ, ಈಗ ಸರ್ಕಾರವು 5 ಲಕ್ಷ ರೂಪಾಯಿಯ ಮಿತಿಯನ್ನು 10 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ. ಈ ಸೌಲಭ್ಯವು ಸೀಮಿತ ವರ್ಗದವರಿಗೆ ಮಾತ್ರ ಲಭಿಸುತ್ತದೆ.
ಕುಟುಂಬಗಳು 5 ಲಕ್ಷ ರೂಪಾಯಿ ಕವರೇಜ್ ಅನ್ನು 10 ಲಕ್ಷ ರೂಪಾಯಿವರೆಗೆ ಲಕ್ಷದವರೆಗೆ ಹೆಚ್ಚಿಸುವ ಟಾಪ್-ಅಪ್ ಅವಕಾಶವನ್ನು ಒದಗಿಸುತ್ತಿದೆ. ಹೌದು, ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಕುಟುಂಬಗಳಲ್ಲಿ 70 ವರ್ಷ ವಯಸ್ಸು ದಾಟಿದವರು ಇದ್ದರೆ, ಅವರು ಈ ಹೆಚ್ಚುವರಿ ಟಾಪ್-ಅಪ್ ಪ್ರಯೋಜನವನ್ನು ಪಡೆಯಬಹುದು.
ಯೋಜನೆಯ ಲಾಭ ಪಡೆಯಲು ಕುಟುಂಬವು ಮತ್ತೊಮ್ಮೆ ಆಧಾರ್ e-KYC ಮಾಡಿಸಬೇಕಾಗುತ್ತದೆ. ಆಧಾರ್ ಇ-ಕೆವೈಸಿ ಯನ್ನು ಮತ್ತೊಮ್ಮೆ ಪೂರ್ಣಗೊಳಿಸಿ, ಹೆಚ್ಚಿಸಿದ ಕವರೇಜ್ ಅನ್ನು ಸಕ್ರಿಯಗೊಳಿಸಬೇಕು. ಆಗ 10 ಲಕ್ಷ ರೂಪಾಯಿವರೆಗೆ ಕವರೇಜ್ ಲಭಿಸುತ್ತದೆ.
ಹಲವು ವಿಮಾ ಕಂಪನಿಗಳು ಉಚಿತ ಚಿಕಿತ್ಸೆ ನೀಡಲು ವಯಸ್ಸಿನ ಮಿತಿ ವಿಧಿಸುತ್ತವೆ. ಆದರೆ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅಂತಹ ಯಾವುದೇ ಮಿತಿ ಇಲ್ಲ. 70 ವರ್ಷ, 80 ವರ್ಷ ದಾಟಿದವರಿಗೂ ವಿಮಾ ಕವರೇಜ್ ಲಭ್ಯವಿದೆ. ದೇಶದ ಬಡವರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದೆ. ಮೊದಲಿಗೆ ಇದು 70 ವರ್ಷದೊಳಗಿನವರಿಗೆ ಮಾತ್ರ ಲಭ್ಯವಿತ್ತು. ಬಳಿಕ ಕೇಂದ್ರ ಸರ್ಕಾರವು 70 ವರ್ಷ ದಾಟಿದವರಿಗೂ ಯೋಜನೆಯ ಸೌಲಭ್ಯ ವಿಸ್ತರಣೆ ಮಾಡಿದೆ.
ಇದನ್ನೂ ಓದಿ: ಕಾರವಾರ | ಶಾಲೆಯಲ್ಲಿ ಬಿಸಿಯೂಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ಥ ; ಆಸ್ಪತ್ರೆಗೆ ದಾಖಲು



















