ಬೆಂಗಳೂರು : ನೆಲಮಂಗಲ ರಕ್ತ ಚರಿತ್ರೆ ಯಾರಿಗೆ ತಾನೆ ನೆನಪಿಲ್ಲ ಹೇಳಿ. ನೆಲಮಂಗಲ ರಕ್ತ ಚರಿತ್ರೆಯಲ್ಲಿ ಬೆತ್ತನಗೆರೆಯದ್ದೆ ಸಿಂಹ ಪಾಲು. ಇದೇ ಬೆತ್ತನಗೆರೆ ಸೀನಾ ಮತ್ತು ಬೆತ್ತನಗೆರೆ ಶಂಕರ ಜೋಡಿ ರೌಡಿಗಳು ನೆಲಮಂಗಲ ರಕ್ತ ಚರಿತ್ರೆ ಮುನ್ನುಡಿ ಬರೆದು ನಂತರ ದುಷ್ಮನ್ ಆಗಿದ್ದು ಇತಿಹಾಸ. ಈ ದುಷ್ಮನಿಯಲ್ಲಿ ಬೆತ್ತನಗೆರೆ ಸೀನಾನ ಸ್ವಂತ ಭಾವ ಹ್ಯಾಡಾಳು ದೇವೇಂದ್ರಪ್ಪ @ ದೇವಿಯನ್ನ ಇದೇ ಬೆತ್ತನಗೆರೆ ಶಂಕರ 15 ವರ್ಷದ ಹಿಂದೆ ಕೊಲೆ ಮಾಡಿದ್ದ.
ಈ ದೇವಿ ಕೊಲೆ ಪ್ರತೀಕಾರ ತೀರಿಸಿಕೊಳ್ಳಲು ಹ್ಯಾಡಾಳು ದೇವೇಂದ್ರಪ್ಪನ ಕಿರಿಯ ಪುತ್ರ ಕಾಂಗ್ರೆಸ್ ಮುಖಂಡ ಕಿರಣ ಸ್ಕೆಚ್ ರೆಡಿ ಮಾಡಿದ್ದರಂತೆ. ತ್ಯಾಮಗೊಂಡ್ಲು ರೌಡಿ ಶೀಟರ್ಗಳಾದ ಶರತ್, ರಾಜೇಶ್, ಹಾಗೂ ತಾವರೆಕೆರೆ ರೌಡಿ ಶೀಟರ್ ಭರತ್ @ಕಾಗೆ ಭರತ್ ಹಾಗೂ ಆಕಾಶ್ ಮತ್ತು ಅಭಿಲಾಶ್ ಸೇರಿದಂತೆ ಕೆಲವರ ಗುಂಪು ಕಟ್ಟಿಕೊಂಡು ಶಂಕರನ ಕೊಲೆಗೆ ಸ್ಕೆಚ್ ಹಾಕಿದ್ರಂತೆ.
ಬೆತ್ತನಗೆರೆ ಶಂಕರ ವಾಸವಿರೋ ಜಾಲಹಳ್ಳಿ ಅಪಾರ್ಟೆಂಟ್, ಶಂಕರ ಓಡಾಡೋ ಸುಂಕದಕಟ್ಟೆ ಮಾಗಡಿ ರಸ್ತೆ ಹಾಗೂ ನೆಲಮಂಗಲ ಭಾಗದಲ್ಲಿ ಶಂಕರನ ಕೊಲೆ ಮೂರ್ನಾಲ್ಕು ಬಾರಿ ಪ್ರಯತ್ನ ಕೂಡ ಪಟ್ಟಿದ್ರಂತೆ. ಆದ್ರೆ, ಮೂರ್ನಾಲ್ಕು ಬಾರಿ ಕೂಡ ಶಂಕರ ಮಿಸ್ ಆಗಿದ್ದಾನೆ.
ಮತ್ತೆ ಶಂಕರ್ನ ಮುಹೂರ್ತ ಫಿಕ್ಸ್ ಮಾಡಿದಾಗ ಸಿಸಿಬಿ ಪೊಲೀಸರಿಗೆ ಮಹಿತಿ ಸಿಕ್ಕಿದ್ದು, ಸದ್ಯ ಶರತ್, ರಾಜೇಶ್, ಕಾಗೆ ಭರತ್, ಅಭಿಲಾಶ್ ಮತ್ತು ಆಕಾಶ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರೋ ಹ್ಯಾಡಾಳು ಕಿರಣ ಹಾಗೂ ಮತ್ತಿತ್ತರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಬಿ ಪೊಲೀಸರು ಈ ಮಾಹಿತಿ ಪತ್ತೆ ಮಾಡದೆ ಇದ್ದಿದ್ರೆ ನೆಲಮಂಗಲ ರಕ್ತಚರಿತ್ರೆ ಪಾರ್ಟ್ 2 ಓಪನ್ ಆಗೋ ಸಾಧ್ಯತೆಯಿತ್ತು.



















