ಫಂಡರಪುರ (ಮಹಾರಾಷ್ಟ್ರ) :
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿಠಲ ರುಕ್ಮಿಣಿ ಮಂದಿರದ ಸಹ ಅಧ್ಯಕ್ಷ ಔಸಾಸಂಸ್ಥಾನದ ಶ್ರೀ ಗಹನಿನಾಥ ಮಹಾರಾಜರ ಭಕ್ತಿ ಸೇವೆಯ ಸಂಕಲ್ಪ ಮತ್ತು ಅವರ ಅಪೇಕ್ಷೆಯಂತೆ ಪಂಡರಪುರದ ವಿಠ್ಠಲನ ಕೊರಳಿಗೆ ಇಷ್ಟಲಿಂಗ ಯುಕ್ತವಾದ ಚಿನ್ನದ ಕರಡಗಿ (ಗುಂಡಗಡಿಗಿ)ಯನ್ನು ರವಿವಾರ ಧಾರಣೆ ಮಾಡಿದರು.
ಪ್ರಸ್ತುತ ಆಷಾಢ ಶುದ್ಧ ಏಕಾದಶಿಯ ಪರ್ವಕಾಲದಲ್ಲಿ ಫಂಡರಪುರ ವಿಠ್ಠಲ – ರುಕ್ಮಿಣಿಯರ ವಿಶೇಷ ಆರಾಧನೆ ಜರುಗುತ್ತಿದ್ದು, ಈ ಸಂದರ್ಭದಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರು ಇದು ಅತ್ಯಂತ ವಿಶೇಷವೆಂದು ಕಣ್ತುಂಬಿಕೊಂಡರು.
ಪೂರ್ಣಕುಂಭ ಸ್ವಾಗತ :
ರವಿವಾರ ಫಂಡರಪುರ ಕ್ಷೇತ್ರಕ್ಕೆ ಆಗಮಿಸಿದ್ದ ಕಾಶಿ ಪೀಠದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ವಿಠ್ಠಲ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಪ್ರಧಾನ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಭಕ್ತಿಯಿಂದ ಬರಮಾಡಿಕೊಂಡರು. ಚಿನ್ನದ ಕರಡಗಿ (ಗುಂಡಗಡಿಗಿ)ಯ ಭಕ್ತಿ ಸೇವಾಕರ್ತರಾದ
ವಿಠಲ ರುಕ್ಮಿಣಿ ಮಂದಿರದ ಸಹ ಅಧ್ಯಕ್ಷ ಔಸಾಸಂಸ್ಥಾನದ ಶ್ರೀ ಗಹನಿನಾಥ ಮಹಾರಾಜರನ್ನು ಕಾಶಿ ಜಗದ್ಗುರುಗಳು ಗೌರವಿಸಿ ಆಶೀರ್ವದಿಸಿದರು.



















