ಕಡಿಮೆ ಸಂಬಳ ಬರೋ ನೌಕರಿ ಮಾಡಿ ಸಾಕಾಗಿದೆ. ಸ್ವಂತ ಉದ್ಯಮ ಆರಂಭಿಸ್ಬೇಕು. ನಾವೂ ಕೈತುಂಬ ಹಣ ದುಡಿಯಬೇಕು. ಅದ್ರಲ್ಲೂ, ಹೋಟೆಲ್ ಬಿಸಿನೆಸ್ ಚೆನ್ನಾಗ್ ನಡೆಯುತ್ತೆ, ಅದನ್ನೇ ಮಾಡ್ಬೇಕು. ಆದ್ರೆ, ಬಂಡವಾಳ ಇಲ್ಲ ಅಂತ ಯೋಚಿಸ್ತಿದೀರಾ? ಹಾಗಾದ್ರೆ ಚಿಂತೆ ಬೇಡ. ರಾಜ್ಯ ಸರ್ಕಾರವು ಹೋಟೆಲ್ ಬಿಸಿನೆಸ್ ಮಾಡೋ ಆಸಕ್ತರಿಗೆ ಕಡಿಮೆ ಬಡ್ಡಿಯಲ್ಲಿ 5 ಲಕ್ಷ ರೂ. ಸಹಾಯಧನ ನೀಡತ್ತೆ. ಇದನ್ನು ಪಡೆದುಕೊಂಡು, ಬಿಸಿನೆಸ್ ಮಾಡಿ, ಜೀವನದಲ್ಲಿ ಯಶಸ್ವಿ ಆಗಬೇಕು ಅನ್ನೋರಿಗೆ ಇದು ಒಳ್ಳೆ ಯೋಜನೆ ಆಗಿದೆ. ಏನಿದು ಯೋಜನೆ? ಸಾಲ ಹೇಗ್ ಪಡೆಯೋದು ಅಂತಿದೀರಾ? ಈ ಸ್ಟೋರಿ ನೋಡಿ.
ಸರ್ಕಾರದಿಂದ ಸಿಗತ್ತೆ 5 ಲಕ್ಷ ರೂ. ಸಬ್ಸಿಡಿ
ಹೋಟೆಲ್ ಬಿಸಿನೆಸ್ ಗೆಂದೇ ಸಿಗತ್ತೆ ಹಣ
ಬಿಸಿನೆಸ್ ಗೆ ಬಂಡವಾಳದ ಚಿಂತೆ ಈಗ ಬೇಡ
ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರು ತಮ್ಮದೇ ಆದ ಬಿಸಿನೆಸ್ ಪ್ರಾರಂಭಿಸಲು ಸಹಾಯ ಮಾಡಲು ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯು ವ್ಯಕ್ತಿಗಳಿಗೆ ಸಂಚಾರಿ ಕ್ಯಾಂಟೀನ್ ವಾಹನಗಳನ್ನು ಖರೀದಿಸಲು ಮತ್ತು ನಿರ್ವಹಿಸಲು ಸಹಾಯಧನ ಒದಗಿಸುತ್ತದೆ. ಅರ್ಹ ಫಲಾನುಭವಿಗಳಿಗೆ 5 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ. ಇದು ವಾಹನದ ವೆಚ್ಚದ ಶೇ.70ರಷ್ಟು ಭಾಗವನ್ನ ಹೊಂದಿರುತ್ತದೆ.
ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ಅನುಕೂಲ
ಬಿಸಿನೆಸ್ ಮಾಡಲು ಸಿಗತ್ತೆ 1 ತಿಂಗಳು ಟ್ರೈನಿಂಗ್
ಇದಾದ ಬಳಿಕ ಬಿಸಿನೆಸ್ ಆರಂಭಿಸಿ, ಸಕ್ಸೆಸ್ ಆಗಿ
ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ/ಕೌಶಲ್ಯ ತರಬೇತಿ ಹಾಗೂ ತರಬೇತಿ ಪಡೆದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ದಿಮೆಯನ್ನು ಆರಂಭಿಸಲು ಸಬ್ಸಿಡಿಯನ್ನು ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ. ಅದೇ ರೀತಿ ಅತಿಥ್ಯ ಕ್ಷೇತ್ರದಲ್ಲಿ ಸಣ್ಣ ಉದ್ಯಮಿದಾರರಾಗಲು ಅಭ್ಯರ್ಥಿಗಳಿಗೆ ಊಟ, ವಸತಿ ಹಾಗೂ ಪ್ರೋತ್ಸಾಹಧನ ಜತೆಗೆ ಕೆಎಸ್ಟಿಡಿಸಿ ಸಂಸ್ಥೆಯ ಮೂಲಕ ಒಂದು ತಿಂಗಳು ತರಬೇತಿಯನ್ನೂ ನೀಡಲಾಗುತ್ತದೆ.
ಸಹಾಯಧನ ನೀಡಲು ಇವೆ ರೂಲ್ಸ್
ಅರ್ಹತೆ ಮಾನದಂಡ ಪೂರೈಸಿದರೆ ಸಾಕು
ಬಿಸಿನೆಸ್ ಆರಂಭಿಸಲು ಇದಕ್ಕಿಂತ ಇನ್ನೇನು ಬೇಕು?
ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಆರಂಭಿಸಲಾಗಿದ್ದು, ಸಹಾಯಧನ ನೀಡಲು ಕೆಲ ನಿಯಮಗಳನ್ನು ರೂಪಿಸಲಾಗಿದೆ. ಸಾಲಕ್ಕೆ ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು. ಅವರು ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿರಬೇಕು. ಹಾಗೆಯೇ, ಕನಿಷ್ಠ ಎಸ್ಸೆಸ್ಸೆಲ್ಸಿ ಪೂರೈಸಿರಬೇಕು. ಕನಿಷ್ಠ 20-45 ವರ್ಷದೊಳಗಿನವರಾಗಿರಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ. ಈ ಎಲ್ಲ ಅರ್ಹತೆ ಇದ್ದವರು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಬಡವರಾಗಿದ್ದರೆ ಮಾತ್ರ ಸಿಗತ್ತೆ ಸಹಾಯಧನ
ಸರ್ಕಾರಿ ನೌಕರರು ಕುಟುಂಬದಲ್ಲಿದ್ದರೆ ಹಣ ಸಿಗಲ್ಲ
ಆದಾಯಕ್ಕೂ ಇದೆ ಸರ್ಕಾರದ ಮಿತಿ
ಲೈಟ್ ಲೈಸೆನ್ಸ್ ಅಥವಾ ಲಘು ವಾಹನ ಚಾಲನಾ ಪರವಾನಗಿ ಇರಬೇಕು. ಅರ್ಜಿ ಸಲ್ಲಿಸುವವರ ಕುಟುಂಬದಲ್ಲಿ ಯಾರೂ ಸರಕಾರಿ ನೌಕರರು ಇರಬಾರದು. ಹಾಗೆಯೇ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಭ್ಯರ್ಥಿಗಳ ವಾರ್ಷಿಕ ಆದಾಯ 1.5 ಲಕ್ಷ ರೂ. ದಾಟಬಾರದು. ಇನ್ನು, ನಗರ ಪ್ರದೇಶಗಳ ಅಭ್ಯರ್ಥಿಗಳಿಗೆ 2 ಲಕ್ಷ ರೂ. ವಾರ್ಷಿಕ ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ. ಇವುಗಳನ್ನು ಗಮನಿಸಿಕೊಂಡು ಅರ್ಜಿ ಸಲ್ಲಿಸುವುದು ಒಳಿತಾಗಿದೆ.
ಮತ್ತಿನ್ಯಾಕೆ ತಡ, ಸರ್ಕಾರದ ಯೋಜನೆಯನ್ನ ಸದ್ಬಳಕೆ ಮಾಡಿಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಿ. ಪ್ರವಾಸೋದ್ಯಮ ಇಲಾಖೆಗೆ ಭೇಟಿ ನೀಡುವ ಮೂಲಕ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿ. ಹಣ ಸಿಕ್ಕ ಕೂಡಲೇ ಉದ್ಯಮ ಆರಂಭಿಸಿ, ಜೀವನದಲ್ಲಿ ಯಶಸ್ವಿಯಾಗಿ. ಆಲ್ ದಿ ಬೆಸ್ಟ್.