ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಕಡೆಗೂ ಹೆಸರು ಬದಲಾವಣೆ ಭಾಗ್ಯ ಲಭಿಸುತ್ತಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಬಾಗೇಪಲ್ಲಿ ನಾಳೆಯಿಂದ ಭಾಗ್ಯನಗರವಾಗಿ ಬದಲಾಗುತ್ತಿದೆ.
ನಾಳೆ ನಂದಿಬೆಟ್ಟದಲ್ಲಿ ನಡೆಯಲಿರುವ ಐತಿಹಾಸಿಕ ಸಂಪುಟ ಸಭೆಯಲ್ಲಿ ಬಾಗೇಪಲ್ಲಿಗೆ ಮರುನಾಮಕರಣದ ಭಾಗ್ಯ ಲಭಿಸಲಿದೆ. ಬಾಗೇಪಲ್ಲಿ ಹೆಸರು ಬದಲಿಸುವ ಕೂಗು ಇಂದು ನಿನ್ನೆಯದಲ್ಲ. 2020ರಲ್ಲೇ ಬಾಗೇಪಲ್ಲಿಯನ್ನು ಭಾಗ್ಯನಗರ ಅಂತಾ ಮರುನಾಮಕರಣ ಮಾಡುವಂತೆ ದೊಡ್ಡ ಮಟ್ಟದ ಹೋರಾಟಗಳು ನಡೆದಿದ್ದವು.
ಆದರೆ, ಅಂತಿಮವಾಗಿ ಇದೀಗ ಸಿದ್ದರಾಮಯ್ಯ ಸರ್ಕಾರ ಬಾಗೇಪಲ್ಲಿಯನ್ನು ಭಾಗ್ಯನಗರವಾಗಿಸುವ ಮೂಲಕ ನಾಳಿನ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿಗೆ ಭರಪೂರ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ.