ಮ್ಯೂಜಿಕ್ ಆಲ್ಬಮ್ ನಿರ್ದೇಶಕ ಮಹೇಶ್ ಝರೀವಾಲ ಅಹಮದಾಬಾದ್ ವಿಮಾನ ದುರಂತ ಘಟಿಸಿದಾಗಿನಿಂದ ನಾಪತ್ತೆಯಾಗಿದ್ದಾರೆ. ನಗರದ ಲಾ ಗಾರ್ಡನ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಕಾಣಲು ಹೋಗಿದ್ದ ಮಹೇಶ್ ಈವರೆಗೂ ಮನೆಗೆ ಮರಳಿಲ್ಲ.
ಏರಿಂಡಿಯಾ ವಿಮಾನ ಪತನವಾದ ದಿನ ಮಧ್ಯಾಹ್ನ 1.14 ನಿಮಿಷಕ್ಕೆ ಪತ್ನಿಗೆ ಕರೆಮಾಡಿದ್ದ ಮಹೇಶ್ ಮೊಬೈಲ್ ನಂತ್ರ ಸ್ಯುಚ್ಡ್ ಆಫ್ ಆಗಿದೆ. ಆಘಾತಕಾರಿ ಅಂದ್ರೆ, ಮಹೇಶ್ ಪತ್ನಿ ನೀಡಿದ ಮಿಸ್ಸಿಂಗ್ ದೂರಿನ ಅನ್ವಯ ತನಿಖೆ ನಡೆಸಿದ ಖಾಕಿಗೆ ಮಹೇಶ್ ಮೊಬೈಲ್ ಕಡೆಯದಾಗಿ ಮೇಘಾನಿ ನಗರ ವ್ಯಾಪ್ತಿಯಲ್ಲಿ ಆಫ್ ಆಗಿದೆ. ಅದ್ರಲ್ಲೂ ಏರಿಂಡಿಯಾ ಪತನವಾದ ಸ್ಥಳದಿಂದ ಕೇವಲ 700 ಮೀಟರ್ ಅಂತರದಲ್ಲಿ ಮೊಬೈಲ್ ಕಡೆಯದಾಗಿ ಟ್ರಾಕ್ ಆಗಿರೋದು ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ಹಾಗಿದ್ರೆ. ದುರಂತದಲ್ಲಿ ಪ್ರಾಣತೆತ್ತ 29 ಅಮಾಯಕರ ಪೈಕಿ ಮಹೇಶ್ ಕೂಡಾ ಒಬ್ಬರ ಅನ್ನೋ ಅನುಮಾನ ಶುರುವಾಗಿದೆ.
ಏರಿಂಡಿಯಾ ನೆಲಕ್ಕೆ ಅಪ್ಪಳಿಸಿದಾಗ ಅಲ್ಲಿದ್ದ 29 ಸ್ಥಳೀಯರೂ ಸಾವನಪ್ಪಿದ್ದಾರೆ. ಈ ಪೈಕಿ ಮಹೇಶ್ ಕೂಡಾ ಒಬ್ಬರಾ ಅಂತಾ ಕುಟುಂಬಸ್ತರು ಆತಂಕಕ್ಕೀಡಾಗಿದೆ. ಈ ನಡುವೆ, ಮಹೇಶ್ ಕುಟುಂಬಸ್ತರು ಡಿಎನ್ ಎ ಸ್ಯಾಂಪಲ್ ಕೂಡಾ ನೀಡಿ ಬಂದಿದ್ದು, ಮಹೇಶ್ ಬದುಕಿದ್ದಾರೋ ಅಥವಾ ದುರಂತದಲ್ಲಿ ಪ್ರಾಣತೆತ್ತಿದ್ದಾರೋ ಅನ್ನೋದು ಇನ್ನಷ್ಟೇ ತೀರ್ಮಾನವಾಗಬೇಕಿದೆ.