ಶ್ರೀನಗರ: ಭಾರತದ ಸಿಂಧೂರ ಪಾಕಿಸ್ತಾನವನ್ನು ಸದಾ ಕಾಡುತ್ತಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಉದ್ಧೇಶಿಸಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ (Operation Sindoor) ಪಾಕ್ಗೆ (Pakistan) ದೊಡ್ಡ ಪೆಟ್ಟು ನೀಡಿದ್ದು, ಸದಾ ಕಾಡುತ್ತದೆ ಎಂದಿದ್ದಾರೆ. ಭಾರತದ ಉತ್ತರವನ್ನು ಉಗ್ರರು ಹಾಗೂ ಪಾಕಿಸ್ತಾನ ಊಹಿಸಿರಲಿಲ್ಲ. ಕೆಲವೇ ನಿಮಿಷದಲ್ಲಿ ನಡೆದ ಈ ದಾಳಿಯಲ್ಲಿ ದಶಕಗಳಿಂದ ನಿರ್ಮಾಣವಾಗಿದ್ದ ಉಗ್ರರ ಅಡಗುತಾಣಗಳು ನಾಶವಾಗಿವೆ. ಆಪರೇಷನ್ ಸಿಂಧೂರ ಹೆಸರು ಕೇಳುತ್ತಿದ್ದಂತೆ ಪಾಕ್ ಗೆ ಅವಮಾನಕರ ಸೋಲು ಎದುರಾಗುತ್ತದೆ ಎಂದಿದ್ದಾರೆ.
ಕಾಶ್ಮೀರದ ರಕ್ಷಣೆಗೆ ಬದ್ಧರಾಗಿದ್ದೇವೆ. ಭಯೋತ್ಪಾದಕರ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ಯುವಕ ಆದಿಲ್ನ ಧೈರ್ಯವನ್ನೂ ಮೋದಿ ಕೊಂಡಾಡಿದ್ದಾರೆ.