ಕೋಲಾರ: RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
RCB ಸಂಭ್ರಮಾಚರಣೆ ಯಾರಿಗೆ ಅವಶ್ಯಕತೆ ಇತ್ತೊ? ಇಲ್ವೊ ಗೊತ್ತಿಲ್ಲ. ಆದರೆ ನಂಗಂತೂ ಅವಶ್ಯಕತೆ ಇತ್ತು. ದುರಂತ ಆಗಬಾರದಿತ್ತು. ನಡೆದು ಹೋಗಿದೆ. ತಪ್ಪು ಯಾರದ್ದು ಎಂಬುದನ್ನು ಇಲ್ಲಿ ಹುಡುಕುವುದು ಬೇಡ. ಕಲ್ಲು ಎತ್ತಿ ಮರಕ್ಕೆ ಹಾಕಿದರೆ ಮಾತ್ರ ಕಾಯಿ ಬೀಳುವುದು ಎಂದಿದ್ದಾರೆ.
ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಸರಿಯಲ್ಲ. ಸಂಭ್ರಮದ ವೇಳೆ ಅಭಿಮಾನಿಗಳು ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ಇದೊಂದು ಅನಿರೀಕ್ಷಿತ ಘಟನೆ, ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ನಿರೀಕ್ಷೆಗಿಂತ ಹೆಚ್ಚು ಜನರು ಸೇರಿದ್ದಾರೆ. ಅದರಿಂದ ಹೀಗಾಗಿದೆ ಎಂದಿದ್ದಾರೆ.
KSCA ನಿಂದ ಆಟಗಾರರನ್ನು ಕರೆಸಲಾಗಿದೆ. ಕೆಲ ಆಟಗಾರರು ಹೊರದೇಶಕ್ಕೆ ವಾಪಸ್ ಹೋಗುವವರಿದ್ದರು. ಹಾಗಾಗಿ ನೆನ್ನೆಯ ಸಂಭ್ರಮಾಚರಣೆಗೆ ಎಲ್ಲರನ್ನೂ ಕರೆಸಲಾಗಿದೆ. ಕೋಲಾರದ ಸಹನಾ ಸಾವು ಕೂಡ ದುರಂತ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.