ಯಾದಗಿರಿ: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಶಿವಲಿಂಗ ತಾಯಿ ಮಾದ್ಯಮಗಳಿಗೆ ಪ್ರತಿಕ್ರಯಿಸಿದ್ದಾರೆ.
ಕಾಲೇಜು ಟಿಸಿ ತರುತ್ತೇನೆಂದು ಹೇಳಿ ಹೋಗಿದ್ದ. ನಾವು ಕೆಲಸಕ್ಕೆ ಹೋದಾಗ ಟಿಸಿ ತಂದು ಮನೆಯಲ್ಲಿ ಇಟ್ಟಿದ್ದ. 11 ಗಂಟೆಗೆ ಅವರಪ್ಪ ಬಂದು ನೋಡಿದಾಗ ಮನೆಯಲ್ಲಿ ಮಲಗಿಕೊಂಡಿದ್ದ. ಅವನು ಹೋಗಿದ್ದು ನಮಗೆ ಗೊತ್ತಿಲ್ಲ.
ಸಂಜೆ ಆರು ಗಂಟೆಗೆ ಮಗ ಬರಲಿಲ್ಲ ಅಂತ ಪೋನ್ ಮಾಡಿದ್ದೇವು. ಆಗ ನನ್ನ ಮಗ ಪೋನ್ ಎತ್ತಲಿಲ್ಲ. ಪೊಲೀಸರು ಎತ್ತಿದರು. ಆ್ಯಕ್ಸಿಡೆಂಟ್ ಆಗಿದೆ. ನೀವು ಬನ್ನಿ ಮಾತನಾಡೋಣ ಎಂದರು. ನನ್ನ ಮಗ ಮುಂಜಾನೆನೆ ಕ್ರಿಕೆಟ್ ಗೆ ಹೋದರೆ ತುಳಿದು ಬಿಸಾಕ್ತಾರೆ ಅಂದಿದ್ದ. ಯಾರು ಕರೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ, ವಿರಾಟ್ ಕೊಹ್ಲಿ ನೋಡುತ್ತೇನೆಂದು ಮಗ ಹೋಗಿದ್ದಾನೆ. ಮನೆ ತುಂಬಾ ವಿರಾಟ ಕೊಹ್ಲಿ ಪೋಟೋ ಇಟ್ಟಿದ್ದಾರೆ. ನನ್ಮಗನಿಗೆ ಕೊಹ್ಲಿ ಮೇಲೆ ಬಹಳ ಹುಚ್ಚಿತ್ತು. ಕೊಹ್ಲಿ ನೋಡೋಕೆ ಹೋದಾಗ ಹೀಗೆ ತುಳಿದಿದ್ದಾರೆ. ಆದರೆ, ವಿರಾಟ್ ಕೊಹ್ಲಿ, ನನ್ನ ಮಗನಿಗೆ ಏನು ಕೊಟ್ಟೆಯಪ್ಪಾ? ಎಂದು ಪ್ರಶ್ನಿಸಿ ಗೋಳಾಡಿದ್ದಾರೆ.