ಚಿಕ್ಕಬಳ್ಳಾಪುರ: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ ಮೃತಪಟ್ಟಿದ್ದ ಪ್ರಜ್ವಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜ್ವಲ್ ಕುಟುಂಬ ಒಂದೇ ತಿಂಗಳಲ್ಲಿ ಎರಡೆರಡು ಬಾರಿ ಸ್ಮಶಾನಕ್ಕೆ ಹೋಗುವಂತಹ ಸ್ಥಿತಿ ಅನುಭವಿಸಿದೆ. ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ಕಳೆದ 10 ದಿನಗಳ ಹಿಂದೆ ಅಜ್ಜಿಯನ್ನು ಕಳೆದುಕೊಂಡಿದ್ದ ಕುಟುಂಬ, ಈಗ ಮಗನನ್ನು ಕಳೆದುಕೊಂಡು ಮತ್ತೆ ಸ್ಮಶಾನದ ಕಡೆ ಹೋಗುವಂತಾಗಿತ್ತು.