ಬೆಂಗಳೂರಿನ ಚಿನ್ನಸ್ವಾಮಿ ದುರಂತ ಅತ್ಯಂತ ಘನಘೋರ. ಸಾವನಪ್ಪಿದ ಪುಟ್ಟ ಕಂದಮ್ಮಗಳ ಸಾವು ಯಾವ ಕುಟುಂಬಕ್ಕೇ ಆದರೂ ಅರಗಿಸಿಕೊಳ್ಳಲಾರದಂಥದ್ದು. ಅವರ ಮುಖಗಳನ್ನು ನೋಡಿ ನಾನೂ ನೊಂದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗದ್ಗದಿತರಾಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಈ ದುರಂತದ ವಿಚಾರ ತಿಳಿಯುತ್ತಿದ್ದಂತೆ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ. ನಗರ ಪೊಲೀಸ್ ಆಯುಕ್ತರು ಈ ಬಗ್ಗೆ ನನಗೆ ಮಾಹಿತಿ ನೀಡುತ್ತಿದ್ದಂತೆ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದೇವೆ. 10 ನಿಮಿಷ ಕೂಡಾ ಕಾರ್ಯಕ್ರಮವನ್ನು ಮುಂದುವರಿಸಿಲ್ಲ. ಕೆಎಸ್ಎಸಿಗೆ ಹೋಗಬೇಕೆನ್ನೋ ಎನ್ನುವ ವಿಚಾರ ಇರಲಿಲ್ಲ. ಆದರೆ, ಪದಾಧಿಕಾರಿಗಳ ಆಹ್ವಾನ ಮತ್ತು ಒತ್ತಡಕ್ಕೆ ಮಣಿದು ಅಲ್ಲಿನ ಕಾರ್ಯಕ್ರಮಕ್ಕೆ ಹೋದೆ ಎಂದು ಡಿಕೆಶಿ ಹೇಳಿದ್ದಾರೆ.