ವಿಧಾನಸಭೆಯಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಬಿಜೆಪಿ ಸಂಖ್ಯಾಬಲ. ಈಗಾಗಲೇ ಲೋಕಸಭೆಗೆ ಸ್ಪರ್ಧಿಸಿದ್ದ ಬಸವರಾಜ ಬೊಮ್ಮಾಯಿಂದ ತೆರವಾಗಿದ್ದ ಶಿಗ್ಗಾವಿ ಕ್ಷೇತ್ರ ಕೈವಶವಾಗಿದೆ. ಈ ಮೂಲಕ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 65ಕ್ಕೆ ಕುಸಿಯಲ್ಪಟ್ಟಿತ್ತು. ಇದರ ನಡುವೆ, ಚನ್ನಪಟ್ಟಣ ಕೂಡಾ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿ ಗೆಲುವು ಸಾಧಿಸಿದ್ದು ಕೂಡಾ ಕೇಸರಿ ಪಕ್ಷಕ್ಕೆ ಹಿನ್ನೆಡೆಯನ್ನ ತಂದಿತ್ತು.
ಇದೀಗ ಮತ್ತೊಮ್ಮೆ ಬಿಜೆಪಿ ಗಣಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಯೆಸ್ ಮೊನ್ನೆಯಷ್ಟೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಉಚ್ಛಾಟನೆ ಮಾಡಲಾಗಿದೆ. ಇನ್ನು ಇವತ್ತು, ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಯಲ್ಲಾಪುರದ ಶಿವರಾಂ ಹೆಬ್ಬಾರನ್ನೂ ಉಚ್ಛಾಟನೆ ಮಾಡಲಾಗಿದೆ. ಈ ಮೂಲಕ ಬಿಜೆಪಿ ಶಾಸಕರ ಬಲ ಮತ್ತೆ ಕುಸಿತದ ಹಾದಿ ಹಿಡಿದಿದೆ. ಈ ಮಧ್ಯೆ, ಅಕ್ರಮ ಗಣಿಗಾರಿಕೆಯಲ್ಲಿ ಜೈಲು ಸೇರಿರೋ ಗಾಲಿ ಜನಾರ್ಧನ ರೆಡ್ಡಿ ಶಾಸಕತ್ವವೂ ಅನರ್ಹವಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಶಾಸಕರ ಬಲ 62ಕ್ಕೆ ಕುಸಿತ ಕಂಡಂತಾಗಿದೆ.