ರಾಜ್ಯದಲ್ಲಿ ಭಾರೀ ಮಳೆಗೆ ಹಲವು ಅನಾಹುತಗಳು ಸಂಭವಿಸಲಿವೆ. ಇದರ ಜೊತೆ ಕೊರೊನಾ ಮಾಹಾಮಾರಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಲಿವೆ. ನಾಡು ಹಾಗೂ ದೇಶಕ್ಕೆ ಎದುರಾಗುವ ಆಪತ್ತಿನ ಬಗ್ಗೆ ಕೋಡಿಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದ್ದಾರೆ.
ಐದು ವರ್ಷಗಳ ಬಳಿಕ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಬರಲಿದೆ ಎಂದು ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಕರ್ನಾಟಕಕ್ಕೆ ಈ ಬಾರಿ ಸರಣಿ ಅವಾಂತರಗಳು ಕಾದಿವೆ ಅಂತಾ ಭವಿಷ್ಯ ನುಡಿದಿದ್ದಾರೆ.
ವಾಯುರೂಪದಲ್ಲಿ ಮಹಾ ಬಾಧೆ ಎದುರಾಗಲಿದೆ ಎನ್ನುವಮೂಲಕ ಮತ್ತೆ ಕೊರೊನಾ ಮಹಾಮಾರಿ ಆರ್ಭಟದ ಮುನ್ಸೂಚನೆ ನೀಡಿದ್ದಾರೆ. ಐದು ವರ್ಷಗಳ ಬಳಿಕ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಬರಲಿದೆ. ಜನರು ಹುಷಾರಾಗಿರುವುದು ಉತ್ತಮ ಎಂದಿದ್ದಾರೆ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಹೆಚ್ಚುವ ಸಾಧ್ಯತೆಗಳಿವೆ ಎಂದಿದ್ದಾರೆ.
ಇಡೀ ಲೋಕಕ್ಕೆ ಮುಂದಿನ ಐದು ವರ್ಷ ವಾಯು ಹಾಗೂ ಜಲ ಗಂಡಾಂತರವಿದೆ ಎಂದಿರೋ ಕೋಡಿಮಠ ಶ್ರೀಗಳು, ಹಿಮಾಲಯದ ಹಿಮ ಕರಗಿ ದೆಹಲಿವರೆಗೆ ಹರಿಯಲಿದೆ ಅನ್ನೋ ಸ್ಫೋಟಕ ಭವಿಷ್ಯ ನುಡಿದ್ದಾರೆ. ಅಷ್ಟೇ ಅಲ್ಲಾ ಈ ಬಾರಿ ಉತ್ತರದಲ್ಲಿ ಭಾರೀ ಮೇಘಸ್ಪೋಟದ ಸುಳಿವು ನೀಡಿದ್ದು, ಭೂಕಂಪಗಳು ಜನರ ಎದೆ ನಡುಗಿಸಲಿದೆ ಎಂದಿದ್ದಾರೆ.
ಇದರ ನಡುವೆ, ಮತೀಯ ಗಲಭೆಗಳು ಹೆಚ್ಚಾಗಲಿದ್ದು, ರಾಜಕೀಯವಾಗಿ ಅರಸರ ಮನೆಗೆ ಕಾರ್ಮೋಡ ಕವಿದಿತ್ತು ಎಂದು ಕೋಡಿ ಶ್ರೀಗಳು ಮಾರ್ಮಿಕವಾಗಿ ನುಡಿದಿದ್ದಾರೆ. ಯುದ್ಧದ ಭೀತಿ ಮತ್ತೆ ಆವರಿಸಲಿದ್ದು, ಜನರಲ್ಲಿ ಅಶಾಂತಿ ಮೂಡಲಿದೆ. ಇದರ ಜೊತೆಯೇ ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಸೃಷ್ಠಿಯಾಗಲಿವೆ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದ್ದಾರೆ.