ರಾಯಚೂರು: ರಾಜ್ಯದಾದ್ಯಂತ ಈಗಾಗಲೇ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಮುಂಜಾನೆ ಸುರಿದ ಮಳೆಯಿಂದಾಗಿ ಮಸ್ಕಿ ಪಟ್ಟಣದ ಅಂಚೆ ಕಚೇರಿಗೆ ಜಲ ದಿಗ್ಬಂಧನವಾಗಿದೆ. ಹೌದು ಅಂಚೆಕಛೇರಿ ಸುತ್ತ ಕೆರೆಯ ಪರಿಸರ ನಿರ್ಮಾಣವಾಗಿದೆ ಹೀಗಾಗಿ ಕಛೇರಿ ಕೆಲಸಕ್ಕೆ ಆಗಮಿಸುವ ವೃದ್ಧರು, ಅಂಗವಿಕರು, ಸಾರ್ವಜನಿಕರು ಹರಸಾಹಸಪಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಲ್ಲೂ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ಮಲೆ ನಾಡಿನಂತಾದ ಬಿಸಿಲ ನಾಡಲ್ಲಿ ಬೆಳ್ಳಂಬೆಳಗ್ಗೆ ಭಾರಿ ಮಳೆ ಸುರಿದು ಈ ಅವಾಂತರ ಸೃಷ್ಟಿಸಿದೆ