ಚಿಕ್ಕೋಡಿ : ಶಾಸಕ ಯತ್ನಾಳ್ ಹಾಗೂ ಸಚಿವ ಶಿವಾನಂದ ಪಾಟೀಲ್ ಮಧ್ಯೆ ಮಾತಿನ ಸಮರ ಮುಂದುವರೆದಿದ್ದು, ಇಬ್ಬರಿಗೂ ಶಾಸಕ ರಾಜು ಕಾಗೆ ಕಿವಿ ಮಾತು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನ ಪ್ರತಿನಿಧಿಗಳು. ಇಂತಹ ಹೇಳಿಕೆಗಳು ನಮಗೆ ಶೋಭೆ ತರುವುದಿಲ್ಲ. ಬಾಯಿಗೆ ಬಂದತೆ ನಾವೇ ಮಾತನಾಡಿದರೆ, ಜನರಿಗೆ ಯಾವ ನೈತಿಕತೆಯ ಮೇಲೆ ಬುದ್ಧಿ ಹೇಳಬೇಕು. ಯತ್ನಾಳ್ ಮಾಡಿರುವ ಚಾಲೆಂಜ್ ನ್ನು ಶಿವಾನಂದ ಪಾಟೀಲ್ ಸ್ವೀಕರಿಸಿದ್ದಾರೆ. ಇದಕ್ಕೆ ಯತ್ನಾಳ್ ಸಿದ್ಧರಾಗಬೇಕು.
ನಮ್ಮ ತಪ್ಪುಗಳನ್ನು ಹಿಡಿದು ಸರಿಪಡಿಸಬೇಕಾದ ಕೆಲಸ ವಿಪಕ್ಷಗಳದ್ದು. ಅದನ್ನು ಬಿಟ್ಟು ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ. ಅವರ ಮನೆತನದ ವಿಚಾರ ಪ್ರಸ್ತಾಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಅಡ್ಡ ಹೆಸರು ಕಾಗೆ ಅಂತ ಇದೆ. ನಾನು ಸಹ ಒಬ್ಬ ಗೌಡ. ನನಗೆ ಕಾಗೆ ಅಂದ ತಕ್ಷಣ ಜಗಳವಾಡಲು ಸಾದ್ಯವಾ? ಎಂದು ಹೇಳಿದ್ದಾರೆ.