ಕಾರವಾರ: ಮಾಟ- ಮಂತ್ರ ಮಾಡಿ ಜನರಲ್ಲಿ ಭಯ ಮೂಡಿಸುತ್ತಿದ್ದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿ ಜನರು ಥಳಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಶಿರಸಿ ತಾಲೂಕಿನ ಕುಪಗಡ್ಡೆಯ ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ. ಬೆಳಗಾವಿ ಮೂಲದ ವ್ಯಕ್ತಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಕುಂಬಳ ಕಾಯಿ ಒಡೆಯುವುದು, ನಿಂಬೆ ಹಣ್ಣು ಮಂತ್ರಿಸಿ ಮನೆಯ ಮುಂದಿಡುವುದು ಮಾಡುತ್ತಿದ್ದನಂತೆ. ಗ್ರಾಮಸ್ಥರು ಎಷ್ಟೇ ತಿಳಿ ಹೇಳಿದರೂ ಕೂಡ ಲೆಕ್ಕಿಸತಿರಲಿಲ್ಲವಂತೆ. ಅವನಿಗೆ ಹಲವು ಬಾರಿ ಹೇಳಿದರೂ ಆತ ಮಾತ್ರ ಸುಮ್ಮನಾಗಿರಲಿಲ್ಲ. ಹೀಗಾಗಿ ಮರಕ್ಕೆ ಕಟ್ಟಿಹಾಕಿ ಗ್ರಾಮಸ್ಥರು ಬುದ್ಧಿ ಕಲಿಸಿದ್ದಾರೆ ಎನ್ನಲಾಗಿದೆ.